ಶ್ರೀಲಂಕಾದ ಕೊಲಂಬೋದ ಸುಗತ ದಾಸ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆರನೇ ಅಂತರಾಷ್ಟ್ರೀಯ ಶೋಟೋಕಾನ್ ಕರಾಟೆ ಪಂದ್ಯಾವಳಿಯನ್ನು ಶೋಟೋಕಾನ್ ವರ್ಲ್ಡ್ ಕರಾಟೆ ಅಸೋಸಿಯೇಷನ್ ದಕ್ಷಿಣ ಭಾರತದ ಮುಖ್ಯಸ್ಥರಾದ ರೆನ್ಸಿ ಶಿವಮೊಗ್ಗ ವಿನೋದ್ ರವರು ಉದ್ಘಾಟನೆ ಮಾಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕರೋನ ನಂತರ ಅಂತರಾಷ್ಟ್ರೀಯ ಪಂದ್ಯಾವಳಿಗಳು ಇದೀಗ ಚೇತರಿಸಿಕೊಳ್ಳುತ್ತಿದ್ದು ಮುಂದಿನ ದಿನಗಳಲ್ಲಿ ಗೆಲವು ಮೊದಲಿನಂತೆ ನಡೆಯಲಿದ್ದು ಎಂದರು.ಎಲ್ಲ ಕ್ರೀಡಾಪಟುಗಳು ಉತ್ತಮ ಪ್ರದರ್ಶನವನ್ನು ತೋರಲಿ ಎಂದು ಶುಭ ಕೋರಿದರು.

ವರದಿ ಪ್ರಜಾ ಶಕ್ತಿ…