ನೂತನ ಸೂಡಾ ಅಧ್ಯಕ್ಷನ್ನಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್ ಎಸ್ ಸುಂದರೇಶ್ ಬೃಹತ್ ಬೈಕ್ ರ್ಯಾಲಿ ನಡೆಸಿ ನಡೆಸಿ ಸೂಡಾ ಕಚೇರಿಯಲ್ಲಿ ಇಂದು ಅಧಿಕಾರ ಸ್ವೀಕರಿಸಿದರು.

ಎಂಆರ್ ಎಸ್ ವೃತ್ತದಿಂದ ಜೀಪಿನಲ್ಲಿ ಮೆರವಣಿಗೆ ಹೊರಟ ನೂತನ ಸೂಡಾ ಅಧ್ಯಕ್ಷ ಹೆಚ್ ಎಸ್ ಸುಂದರೇಶ್ ವಿದ್ಯಾನಗರ, ಹೊಳೆ ಬಸ್ ಸ್ಟಾಪ್ ಬಿಹೆಚ್ ರಸ್ತೆ, ಕಾಂಗ್ರೆಸ್ ಕಚೇರಿಗೆ ತಲುಪಿ ರಾಘವೇಂದ್ರ ಸ್ವಾಮಿ ಮಠದ ರಸ್ತೆಯ ಮೂಲಕ ಲಕ್ಷ್ಮಿ ಚಲನಚಿತ್ರ ಮಂದಿರ ಮಾರ್ಗವಾಗಿ ಸೂಡಾ ಕಚೇರಿ ತಲುಪಿದರು.

ಈ ಸಮಯದಲ್ಲಿ ಹಾರತುರಾಯಿಗಳನ್ನ, ಮೈಸೂರ ಪೇಟಗಳನ್ನ ಅಭಿಮಾನಿಗಳು ಕಾಂಗ್ರೆಸ್ ಪಕ್ಷದ ಮುಖಂಡರು ತೊಡಿಸುವ ಮೂಲಕ ಸಾಲು ಸಾಲಾಗಿ ಅಭಿನಂದಿಸಿದರು. ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಜಿಪಂ ಮಾಜಿ ಅಧ್ಯಕ್ಷ ಬಲ್ಕಿಷ್ ಭಾನು, ಡಾ.ಶ್ರೀನಿವಾಸ್, ಮಂಜುನಾಥ್ ಜಿಡಿ ಜಿತೇಂದ್ರ ರಮೇಶ್ ಶೆಟ್ಟಿ ನರಸಿಂಹ ಮೂರ್ತಿ ಹಾಗೂ ಇತರರು ನೂತನ ಅಧ್ಯಕ್ಷರಿಗೆ ಜೊತೆ ಉಪಸ್ಥಿರಿದ್ದರು.

ವರದಿ ಪ್ರಜಾ ಶಕ್ತಿ