ಓಂ ಗಣಪತಿ…

ಶಿವಮೊಗ್ಗದ ಪ್ರಸಿದ್ಧ ಗಣಪತಿ ಓಂ ಗಣಪತಿಯ ರಾಜಬೀದಿ ಉತ್ಸವ ನಡೆಯಿತು.ಉತ್ಸವದಲ್ಲಿ ತಹಶೀಲ್ದಾರ್ ಗಿರೀಶ್ ರವರು ಪಾಲ್ಗೊಂಡಿದ್ದರು. ಓಂ ಗಣಪತಿ ಸಮಿತಿ ವತಿಯಿಂದ ಗಿರೀಶ್ ರವರಿಗೆ ಸನ್ಮಾನಿಸಲಾಯಿತು.

ಸುಮಾರು ವರ್ಷಗಳಿಂದ ನಗರದಲ್ಲಿ ಓಂ ಗಣಪತಿ ಪ್ರತಿಷ್ಠಾಪನೆ ಮಾಡುತ್ತಾ ಬಂದಿದ್ದಾರೆ. ನಗರದ ಅಶೋಕ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿ ಬಜಾರ್ ಬಿಹೆಚ್ ರಸ್ತೆ, ಕೃಷ್ಣಕೆಫೆಯ ಕೆಳಭಾಗದ ರಸ್ತೆ ಮೂಲಕ ಭೀಮನ ತಟದಲ್ಲಿ ಓಂ ಗಣಪತಿ ವಿಸರ್ಜನವಾಯಿತು.

ಹಿಂದೂ ಮಹಾಸಭಾ ಗಣಪತಿಯ ಮೆರವಣಿಗೆಯನ್ನ ಸ್ಥಗಿತಗೊಳಿಸಿದ ಸಂದರ್ಭದಲ್ಲಿ ಓಂ ಗಣಪತಿ ಮುನ್ನಾಲೆಗೆ ಬಂದಿತ್ತು. 1997 ರಿಂದ 2003 ರವರೆಗೆ ಹಿಂದೂ ಮಹಾಸಭಾ ಗಣಪತಿ ಮೆರವಣೆಗೆಯನ್ನ ಸಮಿತಿಯವರೆ ರದ್ದುಗೊಳಿಸಿದ್ದರು. ಮಾಜಿ ಡಿಸಿಎಂ ಈಶ್ವರಪ್ಪನವರಿಗೆ ಬಳೆ ಕುಂಕುಮವನ್ನ ಕಳುಹಿಸಲಾಗುತ್ತದೆಯೋ ಆಗ ಓಂ ಗಣಪತಿ ವಿಸರ್ಜನಾ ಮೆರವಣಿಗೆಯನ್ನ ವಿಜೃಂಭಣೆಯಾಗಿ ಆಚರಿಸಲಾಗಿತ್ತು.

ಈ ಸಂದರ್ಭದಲ್ಲಿ ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಹೆಚ್ ಸಿ ಯೋಗೇಶ್ ಪ್ರಭಾಕರ್ ಶಿವಕುಮಾರ್ ರಂಗೆಗೌಡ ಪ್ರಭಾಕರ್ ಮುಂತಾದವರು ಉಪಸ್ಥಿರಿದ್ದರು.

ವರದಿ ಪ್ರಜಾ ಶಕ್ತಿ

Leave a Reply

Your email address will not be published. Required fields are marked *