ಶಿವಮೊಗ್ಗ ನಗರದ ಪ್ರತಿಷ್ಠಿತ ಭಜನಾ ಪರಿಷತ್ ಶಿವಮೊಗ್ಗ ನಗರದ ಎಲ್ಲಾ ಭಜನಾ ಮಂಡಳಿಗಳ ಒಕ್ಕೂಟ ಇದರ ನೂತನ ಸಾರಥಿಯಾಗಿ ಅಧ್ಯಕ್ಷರಾಗಿ ವೇದ ಬ್ರಹ್ಮ ಶ್ರೀ ಸಂದೇಶ ಉಪಾಧ್ಯಾಯ ಆಯ್ಕೆಯಾಗಿದ್ದಾರೆ.
ಪ್ರಧಾನ ಅರ್ಚಕರು ಶ್ರೀ ನಾಗ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಈ ಆಯ್ಕೆಗೆ ಸಹಮತವನ್ನು ವ್ಯಕ್ತ ಪಡಿಸಿದ ಸಮಸ್ತ ಭಜನಾ ಮಂಡಳಿ ಮುಖ್ಯಸ್ಥರಿಗೆ ಧನ್ಯವಾದಗಳು ತಿಳಿಸಿದ್ದಾರೆ.ಪರಿಷತ್ ನ ಉಪಾಧ್ಯಕ್ಷರಾದ ಶ್ರೀ ಶ್ರೀಧರ್ , ಶ್ರೀ ಪ್ರಸನ್ನ ಗಣಪತಿ ಬಲಮುರಿ ದೇವಸ್ಥಾನದ ಅರ್ಚಕರಾದ ಶ್ರೀ ಶಂಕರ ನಾರಾಯಣ ಭಟ್ , ಶಾಂಕರ ತತ್ವ ಪ್ರಸಾರ ಅಭಿಯಾನದ ನಗರ ಸಹ ಸಂಚಾಲಕರಾದ ಶ್ರೀ ವೆಂಕಟೇಶ ಮೂರ್ತಿ ಅವರು ಹಾಗೂ ಭಜನಾ ಪರಿಷತ್ ನ ಕಾರ್ಯದರ್ಶಿಯಾದ ಶ್ರೀ ಶಬರೀಶ್ ಕಣ್ಣನ್ ಉಪಸ್ಥಿರಿದ್ದರು.