ಹುಟ್ಟು ಹಬ್ಬದ ರೀತಿ ಆಚರಣೆಗಳು ಪರಿಸರ ಕಾಳಜಿ ಬೆಳಸುತ್ತಿರುವು ಆಶಾದಾಯಕ ಬೆಳವಣಿಗೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಸಂಯೋಜಕ ಜಿ.ಡಿ.ಮಂಜುನಾಥ್ ಹೇಳಿದರು.
ಅವರು ಇಲ್ಲಿನ ಗೋಪಾಲಗೌಡ ಬಡಾವಣೆಯಲ್ಲಿರುವ ಚಂದನ ಆರೋಗ್ಯ ಪಾರ್ಕ್ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಪಾರ್ಕ್ ಸದಸ್ಯ ರಂಗಣ್ಣ( ರಂಗನಾಥ್) ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಮಾತಾನಾಡಿ ಪರಿಸರ ಜಾಗೃತಿ ಅನಿವಾರ್ಯವಾಗಿದೆ. ಈ ಜಾಗೃತಿ ಕಾರ್ಯಕ್ರಮ ಕ್ಕೆ ಹುಟ್ಟು ಹಬ್ಬಗಳು ಒಂದು ನೆಪ ಅಷ್ಟೇ ಎಂದರು.
ಗೆಳೆಯರೆಲ್ಲ ಸೇರಿ ಸದಸ್ಯರ ಹುಟ್ಟುಹಬ್ಬವನ್ನು ಪಾರ್ಕ್ ಸ್ವಚ್ಛತೆ, ಗಿಡ ನೆಡುವುದು, ಪಾರ್ಕಿನ ಅಭಿವೃದ್ಧಿಯ ಜತೆಗೆ ಆಚರಿಸುತ್ತಿರುವುದು ಶ್ಲಾಘನೀಯವಾಗಿದೆ. ಈ ಪಾರ್ಕ್ ಹಸಿರಿನ ಉಳಿವಿಗೆ ಹೆಸರಾಗಿದೆ, ಪಾರ್ಕಿನ ಪ್ರತಿಯೊಬ್ಬ ಸದಸ್ಯರು ತಮ್ಮ ಹುಟ್ಟು ಹಬ್ಬದ ನೆಪದಲ್ಲಿ ಗಿಡ ನೆಟ್ಟು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದರು.
ಅಭಿನಂದನೆ ಸ್ವಿಕರಿಸಿ ಮಾತಾನಾಡಿದ ರಂಗಣ್ಣ ಎಲ್ಲರಿಗೂ ಕೃತಜ್ಞತೆ ಹೇಳಿದರು. ಈ ಸಂದರ್ಭದಲ್ಲಿ ಪಾರ್ಕನ ಎಲ್ಲ ಸದ್ಯಸರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.