ಅಧ್ಯಕ್ಷರು ಡಾ|| ಕೆ.ಪಿ. ಅಂಶುಮಂತ್ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಶಿವಮೊಗ್ಗ ರವರು ಬಿ ಆರ್ ಪ್ರಾಜೆಕ್ಟ್ ನಲ್ಲಿ ಇರುವ ಭದ್ರಾ ಡ್ಯಾಮ್ ಗೆ ಭೇಟಿ ನೀಡಿ ಭದ್ರಾ ಡ್ಯಾಮ್ ನಲ್ಲಿ ನಡೆಯುತ್ತಿರುವ ಎಡದಂಡೆ ನಾಲೆಯ sluice ಗೇಟ್ ಕಾಮಗಾರಿಯನ್ನು ಪರಿವೀಕ್ಷಣೆ ಮಾಡಿ ನಂತರ ಭದ್ರಾ ಬಲದಂಡೆಯಲ್ಲಿ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಪರಿವೀಕ್ಷಣೆ ಮಾಡಿ ರೈತ ಮುಖಂಡರುಗಳೊಂದಿಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಭದ್ರಾ ಕಾಡಾ ಆಡಳಿತಾಧಿಕಾರಿಗಳು ಶ್ರೀಯುತ ಸತೀಶ್ ಆರ್, ಹಾಗೂ ಅಧೀಕ್ಷಕ ಇಂಜಿನಿಯರ್ ಶ್ರೀಯುತ ರವಿ ಚಂದ್ರ,ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.