ನಮ್ಮ ರಾಜ್ಯದ ಹೃದಯ ಭಾಗ ಮೈಸೂರು ನಮ್ಮೆಲ್ಲರ ಹೆಮ್ಮೆಯ ಸಾಂಸ್ಕೃತಿಕ ಸೃಜನಶೀಲ ಹಾಗೂ ಪ್ರವಾಸೋದ್ಯಮ ನಗರಿಯ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿ ಸನ್ನಿಧಿಯಲ್ಲಿ ಇಂತಹ ಅಮಾನವೀಯ ಪೈಶಾಚಿಕ ನೀಚಕೃತ್ಯ ನಡೆದಿರುವುದು ಹೆಣ್ಣುಕುಲಕ್ಕೆ ಹಾಗೂ ನಾಡಿನ ಜನತೆ ತಲೆ ತಗ್ಗಿಸುವಂತಹ ಸಂಗತಿಯಾಗಿದೆ. ಸಾಮೂಹಿಕ ಅತ್ಯಾಚಾರವೆಸಗಿರುವ ಕಾಮುಕರಿಗೆ ಕೇವಲ ಜೈಲು ಶಿಕ್ಷೆ ನೀಡದೆ ಕಠಿಣತೀಕರಣ ಶಿಕ್ಷೆಯಾಗಬೇಕು. ಹಾಗಾಗಿ ಮುಖ್ಯಮಂತ್ರಿಗಳು ಹಾಗೂ ಗೃಹ ಮಂತ್ರಿಗಳೇ ಇಂತಹ ನೀಚರನ್ನು ಮಹಿಳೆಯರ ವಶಕ್ಕೆ ಒಪ್ಪಿಸಿದ ತಕ್ಕ ಶಿಕ್ಷೆ ನೀಡುತ್ತೇವೆ. ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ರಕ್ಷಣೆ ನೀಡಬೇಕೆಂದು ಸಾವಿರಾರು ಸಾರಿ ಮನವಿ ನೀಡಿದ್ದೇವೆ. ಪೊಲೀಸರಿಂದ ಕಾನೂನು ಸುವ್ಯವಸ್ಥೆ ಸರಿಯಾದ ರೀತಿಯಲ್ಲಿ ನೀಡಬೇಕೆಂದು ಹಾಗೂ ದುಷ್ಟ ಕೃತ್ಯವೆಸಗಿರುವ ಕಾಮುಕರನ್ನು ಅತಿ ಶೀಘ್ರ ತ್ವರಿತ ಗತಿಯಲ್ಲಿ ಪತ್ತೆಹಚ್ಚಿ ಬಂಧಿಸಬೇಕೆಂದು ಸಾರ್ವಜನಿಕರ ಪರವಾಗಿ ಮನವಿ ಹಾಗೂ ಇಂತಹ ಅಮಾನವೀಯ ಕಾಮುಕರ ವಿರುದ್ಧ ಮಹಿಳಾ ಸಂಘಟನೆಗಳು ಉಗ್ರ ಹೋರಾಟ ಮಾಡಬೇಕೆಂದು ಸಮಾಜಮುಖಿ ರಾಷ್ಟ್ರ ಪರ ಹೋರಾಟಗಾರರಾದ ಡಾ॥ ಶಾಂತಾ ಸುರೇಂದ್ರ ರವರು ಕೇಳಿಕೊಂಡಿದ್ದಾರೆ ಹಾಗೂ ಹೆಣ್ಣುಮಕ್ಕಳು ನಿರ್ಜನ ಪ್ರದೇಶಗಳಲ್ಲಿ ಒಂಟಿಯಾಗಿ ಹೋಗದೆ ಸ್ವರಕ್ಷಣೆ ಕ್ರಮಗಳನ್ನು ಅನುಸರಿಸಬೇಕೆಂದು ತಿಳಿಸಿದ್ದಾರೆ ಪೋಷಕರು ಕೂಡ ತಮ್ಮ ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸಬೇಕೆಂದು ಆಗ್ರಹಿಸಿದ್ದಾರೆ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153