ರಾಷ್ಟ್ರ ಧ್ವಜವನ್ನು ಕೆಂಪು ಕೋಟೆ ಮೇಲೆ ಹಾರಿಸುವುದಾಗಿ ಹೇಳಿದ ಸಚಿವ ಕೆ.ಎಸ್.ಈಶ್ವರಪ್ಪ ನವರ ವಿರುದ್ದ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ.ಅದು ಅದರ ಹಕ್ಕು ಕೂಡ.ಆದರೆ ಸಚಿವರ ಭಾವಚಿತ್ರಕ್ಕೆ ಕಾಲಿನಿಂದ ಸಾರ್ವಜನಿಕವಾಗಿ ಒದ್ದಿರುವುದು ಅವರ ಗೊಂಡಾ ವರ್ತನೆಯ ಅನಾವರಣವಾಗಿದೆ ಎಂದು ಜನಹಿತ ಹೋರಾಟ ಸಮಿತಿಯ ಅಧ್ಯಕ್ಷ ಹೆಚ್.ಎನ್.ಮಂಜುನಾಥ್ ತಿಳಿಸಿದ್ದಾರೆ.

ರಾಷ್ಟ್ರ ದ್ವಜ ಹೇಳಿಕೆ ಬಗ್ಗೆ ಸರ್ಕಾರ ಸಚಿವರ ತಪ್ಪಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರೂ ರಾಜಕೀಯಕ್ಕಾಗಿ ಪ್ರತಿಭಟನೆ ಮಾಡಿ ಜನರನ್ನು ದಿಕ್ಕು ತಪ್ಪಿಸುತ್ತಿದೆ.ಜನರು ಕೂಡ ಪ್ರಬುದ್ದ ರಾಗಿದ್ದು ಕಾಂಗ್ರೆಸ್ ನ ಗೂಂಡಾ ಆಡಳಿತ ವನ್ನು ಸಹಿಸುವುದಿಲ್ಲ ಎಂಬುದಕ್ಕೆ ಅವರು ಅಧಿಕಾರದಲ್ಲಿದ್ದರೂ ಸಿದ್ದರಾಮಯ್ಯ ಅಧಿಕಾರ ಕಳೆದುಕೊಂಡಿರುವುದನ್ನು ಜನ ಮರೆತಿಲ್ಲ..ಅದರಲ್ಲೂ ಹಿರಿಯರೂ.ಜಿಲ್ಲೆಯ ಸಚಿವರಿಗೆ ಈ ರೀತಿಯ ಅವಮಾನ ಸಹಿಸುವುದಿಲ್ಲ ಎಂದು ಹೆಚ್.ಎನ್‌.ಮಂಜುನಾಥ್ ತೀವ್ರವಾಗಿ ಖಂಡಿಸಿದ್ದಾರೆ.