ಬಾಹುಸಾರ ವಿಷನ್ ಸಂಸ್ಥೆ ಇಂಡಿಯಾ – ಪ್ರೇರಣಾ ಘಟಕದ ವತಿಯಿಂದ ಇಂದು ಕರುನಾಡಿನ ನೆಚ್ಚಿನ ನಟ ದಿವಂಗತ ‘ಪುನೀತ್ ರಾಜಕುಮಾರ್ ರವರ ಜನ್ಮದಿನದ’ ಅಂಗವಾಗಿ ಹಾಗೂ ಅವರ ಕೊನೆಯ ಚಿತ್ರ “ಜೇಮ್ಸ್” ಚಿತ್ರ ಬಿಡುಗಡೆಯ ಸಲುವಾಗಿ ಖ್ಯಾತ ಕಲಾವಿದರಾದ ಶ್ರೀ ಹರೀಶ್ ಕುಮಾರ್ ರವರು ನಗರದ ಸಿಟಿ ಸೆಂಟರ್ ಮಾಲ್ ನ 2ನೇ ಮಹಡಿಯಲ್ಲಿರುವ ಭರತ್ ಸಿನೆಮಾ ಹಾಲ್ ನ ಥಿಯೇಟರ್ ಮುಂಭಾಗದಲ್ಲಿ ಪುನೀತ್ ರಾಜ್ ಕುಮಾರ್ ರವರ ಭಾವಚಿತ್ರದ ದೊಡ್ಡ ರಂಗೋಲಿಯನ್ನು ಬಿಡಿಸುವ ಮೂಲಕ ಪುನೀತ್ ರಾಜಕುಮಾರ್ ರವರ ಹುಟ್ಟು ಹಬ್ಬವನ್ನು ಆಚರಿಸಿದರು.

KSSIDC ಯ ಉಪಾಧ್ಯಕ್ಷರಾದ ಎಸ್ ದತ್ತಾತ್ರಿ ಯವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಈ ಸಂಧರ್ಭದಲ್ಲಿ ಖ್ಯಾತ ಕಲಾವಿದರಾದ ಹರೀಶ್ ಕುಮಾರ್, ಕರ್ನಾಟಕ ರೇಷ್ಮೆ ಮಾರುಕಟ್ಟೆ ಮಂಡಳಿಯ ವಿಜಯ್ ಕುಮಾರ್, ಎಂ. ಎನ್ ವೆಂಕಟೇಶ್, ಸಂತೋಷ್ ಮತ್ತು ಗಜೇಂದ್ರ ರವರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…