ಶಿವಮೊಗ್ಗ: ಶಿವಮೂರ್ತಿ ವೃತ್ತದಲ್ಲಿರುವ ಭಾರತೀಯ ಜನೌಷಧ ಕೇಂದ್ರಕ್ಕೆ ಈ ವರ್ಷದ
ಭಾರತದ ಸರ್ವಶ್ರೇಷ್ಠ ಜನೌಷಧ ಕೇಂದ್ರ ಎಂಬ ಪ್ರಶಸ್ತಿ ಲಭಿಸಿದೆ.

ಶಿವಮೊಗ್ಗದಲ್ಲಿ ಪ್ರಾರಂಭವಾಗಿರುವ ಈ ಜನೌಷಧ ಕೇಂದ್ರವು ಸಾರ್ವಜನಿಕರಿಗೆ ಒಳ್ಳೆಯ
ಸೇವೆಯನ್ನು ನೀಡುತ್ತಿದೆ. ಬಡವರಿಗೆ ವರದಾನವಾಗಿರುವ ಜನೌಷಧವನ್ನು ತಲುಪಿಸಿದ
ಕೀರ್ತಿಯೂ ಈ ಕೇಂದ್ರಕ್ಕೆ ಸಂದಿದೆ.

ಈ ಜನೌಷಧ ಕೇಂದ್ರದ ಸೈಯ್ಯದ್ ಆಸೀಫ್ ಅವರು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವವೀಯ
ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.

ವರದಿ ಮಂಜುನಾಥ್ ಶೆಟ್ಟಿ…