ಶಿವಮೊಗ್ಗ: ಇಂದು ಬೆಳಿಗ್ಗೆ  ಶಿವಮೊಗ್ಗ ನಗರದ ಪರಿಸರ ಪ್ರೇಮಿಯಾದ  ಟಿ.ಎಸ್.ಮಹದೇವಸ್ವಾಮಿ ಅವರ ಮಾರ್ಗದರ್ಶನದಲ್ಲಿ  ಶಿವಮೊಗ್ಗ ಮಹಾನಗರ ಆದ ಪಾಲಿಕೆಯ ಮೇಯರ್ ಸುನೀತಾ ಅಣ್ಣಪ್ಪ ಅವರ ಮನೆಯಲ್ಲಿ  ಪೈಪ್ ಕಾಂಪೋಸ್ಟ್ ಅಳವಡಿಸುವ ವಿಧಾನವನ್ನು ಅಳವಡಿಸುವ ಮೂಲಕ  ನಾಗರಿಕರಿಗೆ ಅರಿವು ಮೂಡಿಸಲಾಯಿತು.

ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಮೇಯರ್ ಸುನೀತಾ ಅಣ್ಣಪ್ಪ ಉಪ ಮೇಯರ್ ಶಂಕರ್
ಗನ್ನಿ ಮಹಾನಗರ ಪಾಲಿಕೆ ಆಡಳಿತ ಪಕ್ಷದ ನಾಯಕರಾದ ಎಸ್ ಎನ್ ಚನ್ನಬಸಪ್ಪ ಪರಿಸರ ಪ್ರೇಮಿ
ಟಿ ಎಸ್ ಮಹದೇವಸ್ವಾಮಿ ಮಹಾನಗರ ಪಾಲಿಕೆ  ಆಯುಕ್ತರಾದ  ಮಾಯಣ್ಣ ಗೌಡ, ಸದಸ್ಯರಾದ ಆಶಾ
ಚಂದ್ರಪ್ಪ, ಸುರೇಖಾ ಮುರಳೀಧರ್, ವಿಶ್ವಾಸ್ , ಆರತಿ ಅ.ಮ. ಪ್ರಕಾಶ್ ಪ್ರಮುಖರಾದ ಕೆ.ವಿ. ಅಣ್ಣಪ್ಪ, ಅ.ಮ. ಪ್ರಕಾಶ್ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…