ಶಿವಮೊಗ್ಗ: ದಾದಿಯರ ಸೇವೆ ಅನನ್ಯವಾದುದು. ಆರೋಗ್ಯಕರ ಸಮಾಜ ನಿರ್ಮಾಣ ಮಾಡುವಲ್ಲಿ ಅವರ ಪಾತ್ರ ಮಹತ್ವವಾದುದು ಎಂದು ಕಾಂಗ್ರೆಸ್ ಸೇವಾದಳದ ಜಿಲ್ಲಾಧ್ಯಕ್ಷ ವೈ.ಹೆಚ್. ನಾಗರಾಜ್ ಹೇಳಿದರು.

ಅವರು ಇಂದು ಮೆಗ್ಗಾನ್ ಆಸ್ಪತ್ರೆಯಲ್ಲಿ ಅಂತರರಾಷ್ಟ್ರೀಯ ದಾದಿಯರ ದಿನಾಚರಣೆ ಅಂಗವಾಗಿ ದಾದಿಯರನ್ನು ಸನ್ಮಾನಿಸಿ ಮಾತನಾಡಿದರು.ದಾದಿಯರ ಮಾನವೀಯ ಸೇವೆಯನ್ನು ಗುರುತಿಸುವ ಹಾಗೂ ಗೌರವಿಸುವ ಉದ್ದೇಶದಿಂದ ಈ ದಿನವನ್ನು ದಾದಿಯರ ದಿನ ಎಂದು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. ಆರೋಗ್ಯಕರ ಸಮಾಜ ನಿರ್ಮಾಣ ಮಾಡುವಲ್ಲಿ ದಾದಿಯರ ಪಾತ್ರ ಬಹಳ ಮುಖ್ಯವಾದುದು. ಕೊರೋನಾದ ಸಂದರ್ಭದಲ್ಲಂತೂ ದಾದಿಯರು ತಮ್ಮ ಪ್ರಾಣ ಪಣಕ್ಕಿಟ್ಟು ಕೆಲಸ ಮಾಡಿದ್ದಾರೆ. ಎಷ್ಟೋ ಸಂದರ್ಭದಲ್ಲಿ ತಮ್ಮ ಆತ್ಮೀಯರನ್ನು ಕಳೆದುಕೊಂಡಿದ್ದಾರೆ.

ವೈದ್ಯರಿಗಿಂತಲೂ ಹೆಚ್ಚಾಗಿ ದಾದಿಯರು ಕೆಲಸ ಮಾಡಿದ್ದಾರೆ ಎಂದರು.ನಿಕಟಪೂರ್ವ ಗ್ರಾಮಾಂತರ ಕಾಂಗ್ರೆಸ್ ಅಭ್ಯರ್ಥಿ ಡಾ. ಶ್ರೀನಿವಾಸ ಕರಿಯಣ್ಣ ಮಾತನಾಡಿ, ದಾದಿಯರು ರೋಗಿಗಳಿಗೆ ತಾಯ್ತನದ ಪ್ರೀತಿ ತೋರಿಸುತ್ತಾರೆ. ಅವರ ಕಾಯಕ ಮೆಚ್ಚುವಂತಹುದು. ಅವರ ಕಾಯಕ ಸೇವೆಯನ್ನು ಗುರುತಿಸಿ ಈ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಅವರ ಉದಾತ್ತ ಸೇವೆ ಎಂದೂ ಮರೆಯಾಗದು. ಸಮಾಜ, ಸಂಘ, ಸಂಸ್ಥೆಗಳು, ಸರ್ಕಾರ ಅವರಿಗೆ ಗೌರವ ಕೊಡಬೇಕು ಎಂದರು.

ವರದಿ ಮಂಜುನಾಥ್ ಶೆಟ್ಟಿ…