BREAKING NEWS…

ಶಿವಮೊಗ್ಗ ಮಹಾನಗರಪಾಲಿಕೆಯ ಹೊರಗುತ್ತಿಗೆ ನೌಕರರ ಇಂದು ಎಸಿಬಿ ಬಲೆಗೆ ಬಿದ್ದಿದ್ದಾರೆ. ಕಟ್ಟಡವೊಂದರ ಲೈಸೆನ್ಸ್ ನವೀಕರಣಕ್ಕೆ ಮಾಲೀಕನಿಂದ ಹಣ ಪಡೆಯುವ ವೇಳೆ ಪಾಲಿಕೆ ಹೊರಗುತ್ತಿಗೆ ನೌಕರ ವಿಜಯ್ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಕಟ್ಟಡವೊಂದರ ನವೀಕರಣಕ್ಕೆ 10 ಸಾವಿರ ಬೇಡಿಕೆ ಇಟ್ಟಿದ್ದು ,6 ಸಾವಿರ ಹಣ ಪಡೆಯುತ್ತಿದ್ದ ಸಮಯದಲ್ಲಿ ಸಿಕ್ಕಿದ್ದಾರೆ. ಕೆಲವು ಇಂಜಿನಿಯರ್ಗಳು ಆಪ್ತರಾಗಿ ಈತ ಲಂಚ ಪಡೆಯುತ್ತಿದ್ದರು ಎಂದು ಹೇಳಲಾಗಿದೆ. ಎಸಿಬಿ ಲೋಕೇಶ್ ತಂಡ ದಾಳಿ ನಡೆಸಿದೆ.

ವರದಿ ಮಂಜುನಾಥ್ ಶೆಟ್ಟಿ…