ಜೆಸಿಐ ಶಿವಮೊಗ್ಗ ಮಲ್ನಾಡ್ ವತಿಯಿಂದ ದಿನಾಂಕ 29ರಂದು ಸುರಭಿ ಗೋಶಾಲೆಯಲ್ಲಿ ಐದನೇ ಸರ್ವಸದಸ್ಯರ ಸಭೆಯನ್ನು ವಿಶೇಷವಾಗಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಸುರಭಿ ಗೋಶಾಲೆಯಲ್ಲಿರುವ ಗೋವುಗಳಿಗೆ ಅವಶ್ಯವಿರುವ ಹುಲ್ಲು, ಮೇವು, ಬಾಳೆಹಣ್ಣು ಮತ್ತು ಹಿಂಡಿಯನ್ನು ವಿತರಣೆ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಘಟಕದ ಅಧ್ಯಕ್ಷರಾದ ಜೆ.ಸಿ ಪ್ರದೀಪ್ ಎಸ್ ಕಾರ್ಯದರ್ಶಿಗಳಾದ ಜೆ.ಸಿ.ಸತ್ಯನಾರಾಯಣ ಹಾಗೂ ಘಟಕದ ಎಲ್ಲಾ ಪೂರ್ವ ಅಧ್ಯಕ್ಷರುಗಳು, ಸದಸ್ಯರುಗಳು ಭಾಗವಹಿಸಿದರು ಹಾಗೂ ನಮ್ಮ ಘಟಕದ ವತಿಯಿಂದ ದೇಣಿಗೆಯನ್ನು ಸಂಗ್ರಹಿಸಿ ಗೋಶಾಲೆಯ ಆಡಳಿತ ಮಂಡಳಿಗೆ ನೀಡಲಾಯಿತು.ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನಡೆಯಿತು.

ವರದಿ ಮಂಜುನಾಥ್ ಶೆಟ್ಟಿ…