ಶಿವಮೊಗ್ಗ: ಎಎಪಿ ಪಕ್ಷದ ರಾಷ್ಟ್ರೀಯ ಸಂಚಾಲಕರು ಹಾಗೂ ದೆಹಲಿ ಮುಖ್ಯ ಮಂತ್ರಿಗಳಾಗಿರುವ ಅರವಿಂದ್ ಕೇಜ್ರಿವಾಲ್ ರವರಿಗೆ ಇಂದಿಗೆ 54 ವರ್ಷತುಂಬಿದೆ ಈ ಹಿನ್ನೆಲೆಯಲ್ಲಿ ಮಾಜೀ ಮೇಯರ್ ಹಾಗೂ ಶಿವಮೊಗ್ಗ ಎಎಪಿ ಪಕ್ಷದ ಮುಖಂಡರಾದ ಏಳುಮಲೈ ಕೇಬಲ್ ಬಾಬು ವಿಷೇಶ ರೀತಿಯಲ್ಲಿ ಆಚರಿಸಿದರು.

ಶಿವಮೊಗ್ಗ ನಗರದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಲ್ಲಿ ಬಡರೋಗಿಗಳಿಗೆ ಹಣ್ಣು ಅಂಪಲು ಹಾಗೂ ಬ್ರೆಡ್ ಹಂಚಲಾಯಿತು. ಈ ವೇಳೆ ರೋಗಿಗಳಿಗೆ ಇಂದಿನ ದಿನದ ಮಹತ್ವವನ್ನು ರೋಗಿಗಳಿಗೆ ತಿಳಿಸಲಾಗಿದ್ದು ಅವರುಗಳು ಕೇಜ್ರಿವಾಲ್ ರವರಿಗೆ ಶುಭವಾಗಲಿ ಎಂದು ಹಾರೈಸಿದರು.

ಇದೇ ವೇಳೆ ಮಾತನಾಡಿದ ಏಳುಮಲೈ ಕೇಬಲ್ ಬಾಬು ಅರವಿಂದ್ ಕೇಜ್ರಿವಾಲ್ ಜನರ ಸೇವೆಯಲ್ಲಿ ಭಾರತದ ಏಳಿಗೆಯನ್ನು ಕಾಣುತ್ತಾರೆ. ಬಡಜನರ ಸೇವೆಯೇ ಜೀವನದ ಗುರಿಯನ್ನಾಗಿಟ್ಟುಕೊಂಡು ಬದುಕುತ್ತಿದ್ದು ಈ ಕಾರಣಕ್ಕೆ ತಾವು ಸಹ ಅವರಂತೆಯೇ ಸೇವೆಯ ಮೂಲಕ ಜನರ ಮನ ಮುಟ್ಟುವ ಪ್ರಯತ್ನ ಮಾಡುತ್ತಿರುವುದಾಗಿ ತಿಳಿಸಿದರು.

ವರದಿ ಪ್ರಜಾಶಕ್ತಿ…