ಶಿವಮೊಗ್ಗ ನಗರದಲ್ಲಿ ಮೊನ್ನೆ ನಡೆದ ಗಲಭೆ ಪ್ರಕರಣದಲ್ಲಿ ಚೂರಿ ಇರಿತಕ್ಕೆ ಒಳಗಾಗಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರೇಮ್ ಸಿಂಗ್ ಅವರನ್ನು ಶಿವಮೊಗ್ಗ ಜಿಲ್ಲಾ ರಾಜಪುತ್ ಸಭಾದ ಪ್ರಮುಖರು ಭೇಟಿ ನೀಡಿ ಆರೋಗ್ಯ ವಿಚಾರಿಸಿ ಶೀಘ್ರ ಗುಣಮುಖರಾಗಲೆಂದು ಹಾರೈಸಿದರು.

ಇದೆ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ರಾಜಪುತ್ ಸಭಾದ ಅಧ್ಯಕ್ಷರಾದ ದೀಪಕ್ ಸಿಂಗ್, ಮಾಜಿ ಅಧ್ಯಕ್ಷರಾದ ಎಸ್ ಡಿ ಅನಂತರಾಮ್ ಸಿಂಗ್, ಪ್ರಧಾನಕಾರ್ಯದರ್ಶಿ ಸತ್ಯನಾರಾಯಣ ಸಿಂಗ್, ಪ್ರಮುಖರಾದ ಆರ್ ಪಿ ಭರತರಾಜ್ ಸಿಂಗ್, ರಘುವೀರ್ ಸಿಂಗ್, ನರಸಿಂಗ್, ಕುಮಾರ್ ಸಿಂಗ್ ಹಾಗೂ ಮತ್ತಿತರರು ಹಾಜರಿದ್ದರು.

ವರದಿ ಪ್ರಜಾಶಕ್ತಿ…