ಶಿವಮೊಗ್ಗ ಮಹಿಳಾ ದಸರಾ, ಮಹಿಳಾ ಸ್ವತಂತ್ರದ ನಡಿಗೆ
ಹಾಗೂ ಮಹಿಳಾ ದಸರಾ ಸಮಾರೋಪ ಸಮಾರಂಭ ಗಿಣಿರಾಮ ಧಾರವಹಿ ನಟಿ ನಯನ ಹಾಗೂ ಗಟ್ಟಿಮೇಳ ಧಾರವಾಹಿಯ ಅನ್ವಿತ ಉದ್ಘಾಟಿಸಿದರು.

ಶಿವಮೊಗ್ಗ ಮಹಿಳಾ ದಸರಾ ಕಾರ್ಯಕ್ರಮವು 27ರಂದು ಸಂಜೆ 4.00 ಘಂಟೆಗೆ ಗೋಪಿ ವೃತ್ತದಿಂದ ಫ್ರೀಡಂ ಪಾರ್ಕ್ವರೆಗೂ ಮಹಿಳಾ ಸ್ವಾತಂತ್ರ್ಯ ನಡಿಗೆಯನ್ನು ಭಾರೀ ಅದ್ದೂರಿಯಿಂದ ಜರುಗಿತು. ಈ ನಡಿಗೆಯಲ್ಲಿ ಹಲವಾರು ಕಲಾ ಸಾಂಸ್ಕೃತಿಕ ತಂಡಗಳು, ಬೊಂಬೆಕುಣಿತ, ಡೊಳ್ಳು ಹಾಗೂ ವಿವಿಧ ವೇಷಭೂಷಣಗಳನ್ನು ತೊಟ್ಟ ಮಹಿಳೆಯರು ಹೆಜ್ಜೆ ಹಾಕಿದರು.

ತದನಂತರ ಮಹಿಳಾ ದಸರಾ ಸಮಾರೋಪ ಸಮಾರಂಭದಲ್ಲಿ ಗಿಣಿರಾಮ ಧಾರವಾಹಿಯ ನಟಿ ನಯನ ಹಾಗೂ ಗಟ್ಟಿಮೇಳ ಧಾರವಾಹಿಯ ನಟಿ ಅನ್ವಿತರವರು ಮಹಿಳಾ ದಸರಾವನ್ನು ಉದ್ಘಾಟಿಸಿದರು. ವಿಶೇಷ ಅತಿಥಿಯಾಗಿ ಸೋಷಿಯಲ್ ಮೀಡಿಯಾ ಸ್ಟಾರ್ ಕಾಫಿನಾಡು ಚಂದುರವರು ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ಮೇಯರ್ ಸುನೀತಾ ಅಣ್ಣಪ್ಪನವರು ಹಾಗೂ ಕಾರ್ಯಕ್ರಮದ ಅಧ್ಯಕ್ಶತೆಯನ್ನು ಮಹಿಳಾ ದಸರಾ ಸಮಿತಿಯ ಅಧ್ಯಕ್ಷರೂ ಹಾಗೂ ವಿರೋಧಪಕ್ಷದ ನಾಯಕಿಯಾದ ರೇಖಾ ರಂಗನಾಥ್‌ರವರು ವಹಿಸಿದ್ದರು.

ಕಾರ್ಯಕ್ರಮದಲ್ಲಿ ಪಾಲಿಕೆ ಆಡಳಿತ ಪಕ್ಷದ ಎಸ್.ಎನ್.ಚನ್ನಬಸಪ್ಪ, ಹೆಚ್.ಸಿ.ಯೋಗೀಶ್, ಅನಿತಾಶಂಕರ್, ಜ್ಞಾನೇಶ್ವರ್, ಆರತಿ ಅ.ಮ.ಪ್ರಕಾಶ್, ಸುವರ್ಣ ಶಂಕರ್, ಸುರೇಖಾ ಮುರುಳೀಧರ್, ವiಂಜುಳಾ ಶಿವಣ್ಣ, ಸಂಗೀತಾನಾಗರಾಜು ಭಾನುಮತಿ ವಿನೋದ್‌ಕುಮಾರ್, ಕಲ್ಪನಾ ರಮೇಶ್, ಲಕ್ಷ್ಮಿ ಶಂಕರ್ ನಾಯ್ಕ, ಅನ್ನಪೂರ್ಣ, ಶಿರೀಷ ಹಾಗೂ ಪಾಲಿಕೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…