ಶಿವಮೊಗ್ಗ ನಗರದ ವೆಂಕಟೇಶ್ ನಗರ ಒಂದನೇ ತಿರುವಿನ ಮನೆ ಮುಂಭಾಗದಲ್ಲಿ ವ್ಯಕ್ತಿಯೊಬ್ಬನ ಕೊಲೆಯಾಗಿದೆ.

ಚಾಕುವಿನಿಂದ ಒಟ್ಟಿಗೆ ತಿವಿದು ಆತನನ್ನು ಕೊಲೆ ಮಾಡಲಾಗಿದೆ. ಮೃತ ವ್ಯಕ್ತಿಯು ವಿಜಯ್ ವೆಂಕಟೇಶ್ ನಗರ ಮೊದಲ ತಿರುವಿನಲ್ಲಿರುವ ಭಾರತ್ ನ್ಯೂರೋ ಕ್ಲಿನಿಕ್ ನಲ್ಲಿ ಮ್ಯಾನೇಜರ್ ಯಾಗಿ ಕೆಲಸ ಮಾಡುತ್ತಿದ್ದ ಏನಲಾಗಿದೆ.

ರಾತ್ರಿ 3 ಗಂಟೆ ಸುಮಾರಿಗೆ ಆತನಿಗೆ ಆಸ್ಪತ್ರೆಯಿಂದ ಕರೆ ಬಂದಿದ್ದು ಆತ ಆಸ್ಪತ್ರೆಗೆ ಹೋಗಿದ್ದಾನೆ ಎಂದು ಮನೆಯವರು ತಿಳಿಸಿದ್ದಾರೆ.
ಸ್ಥಳಕ್ಕೆ ಜಯನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಮಾದಪ್ಪ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವರದಿ ಪ್ರಜಾಶಕ್ತಿ…