ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ವತಿಯಿಂದ ಅಶೋಕ್ ನಗರ ಮುಖ್ಯ ರಸ್ತೆಯಲ್ಲಿ 67ನೇ ಕನ್ನಡ ರಾಜ್ಯೋತ್ಸವ ಜಿಲ್ಲಾಧ್ಯಕ್ಷ ಕಿರಣ್ ಕುಮಾರ್ ನೇತೃತ್ವದಲ್ಲಿ ಅದ್ದೂರಿಯಾಗಿ ವಿಶೇಷ ರೀತಿಯಲ್ಲಿ ನಡೆಯಿತು.

ಅಶೋಕ್ ನಗರ ಮುಖ್ಯ ರಸ್ತೆಯಲ್ಲಿ ಆಚರಿಸಿದ 67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜೆಡಿಎಸ್ ನ ಎಮ್ ಶ್ರೀಕಾಂತ್ ಹಾಗೂ ಮಾಜಿ ಶಾಸಕರಾದ ಕೆ ಬಿ ಪ್ರಸನ್ನ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಅತಿಥಿಗಳಾಗಿ ಮಹಾನಗರ ಪಾಲಿಕೆ ಸದಸ್ಯರಾದ ಯೋಗೇಶ್ ಕರ್ನಾಟಕ ಪತ್ರಿಕಾ ಸಂಪಾದಕರ ಸಂಘದ ಅಧ್ಯಕ್ಷರಾದ ಪದ್ಮನಾಭ ಸಾಹಿತಿ ಹಾಗೂ ಪತ್ರಕರ್ತರಾದ ಗಾರಾ ಶ್ರೀನಿವಾಸ್ ಆಮ್ ಆದ್ಮಿ ಪಕ್ಷದ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ನೇತ್ರಾವತಿ ಟಿ , ಅಲ್ಪಸಂಖ್ಯಾ ಮೋರ್ಚಾದ ಅಧ್ಯಕ್ಷರಾದ ಮಹಮದ್ ಶಫಿವುಲ್ಲಾ ಕರವೇ ಯುವಸೇನೆಯ ಕಾನೂನು ಸಲಹೆಗಾರರ ಅನಿಲ್ ಕುಮಾರ್ ಟಿ ಕೆ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸೇವ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.ಕಾರ್ಯಕ್ರಮದ ನಿರೂಪಣೆಯನ್ನು ಶಂಕರ್ ಎಂ ಆರ್ ನೆರವೇರಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷರಾದ ಕಿರಣ್ ಕುಮಾರ್ ಹೆಚ್. ಎಸ್. ವಹಿಸಿದ್ದರು ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಹಾಗೂ ಪ್ರೀತಮ್ ಮಲೋಡಿ ಆರ್ಕೆಸ್ಟ್ರಾ ಭದ್ರಾವತಿ ಇವರಿಂದ ರಸಮಂಜರಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.ಕಾರ್ಯಕ್ರಮದಲ್ಲಿ ಪದಾಧಿಕಾರಿಗಳಾದ ಜಿಲ್ಲಾ ಕಾರ್ಯಅಧ್ಯಕ್ಷರಾದ ಶಿವಕುಮಾರ್ ಎಸ್‌.ಬಿ ಗ್ರಾಮಾಂತರ ಅಧ್ಯಕ್ಷರಾದ ನಾಗೇಂದ್ರ ಡಿಜಿ ಜಿಲ್ಲಾ ಖಜಂಚಿ ಗಣೇಶ್ ಸತೀಶ್ ಶಬರಿ ಯುವ ಘಟಕದ ಜಿಲ್ಲಾ ಅಧ್ಯಕ್ಷರಾದ ತಿಮ್ಮರಾಜು ದ್ಯಾವನಕೆರೆ ಎಡೆಹಳ್ಳಿಅಧ್ಯಕ್ಷರಾದ ಕೇಶವಮೂರ್ತಿ ಶ್ರೀಮತಿ ಲತಾ ವೀರಣ್ಣ ರಾಮಣ್ಣ ಫುಟ್ ಕೋರ್ಟ್ ಪರಶುರಾಮ್ ಆಫೀಜ್ ರಾಮು ಜಾದವ್ ಭದ್ರಾವತಿಯ ತಾಲೂಕ ಅಧ್ಯಕ್ಷರಾದ ಮಂಜುನಾಥ್ ಹೊನ್ನಳ್ಳಿ ತಾಲೂಕ ಅಧ್ಯಕ್ಷರಾದ ಮಂಜು ಜೆ ಮುಂತಾದ ಪದಾಧಿಕಾರಿಗಳು ಭಾಗವಹಿಸಿದ್ದರು.

ವರದಿ ಪ್ರಜಾಶಕ್ತಿ…