ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಅಣ್ಣಾನಗರದ ಮನೆಯೊಂದರಲ್ಲಿ ಎಕ್ಸಾಕ್ಟ್ ಫ್ಯಾನ್ ಮುರಿದು ಮನೆಯೊಳಗಿದ್ದ ಗಾಡ್ರೇಜ್ ಬೀರುವಿನಲ್ಲಿದ್ದ ನಗದು ಹಣ, ಟಿವಿ, ಮೊಬೈಲ್ ಮತ್ತು ವಾಚ್ ಕಳ್ಳತನ ಮಾಡಿ ಕಳ್ಳರು ಕೈಚಳಕವನ್ನು ತೋರಿಸಿದ್ದಾರೆ.

ನಂತರ ಮನೆಯವರು ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 467/2022 ಕಲಂ: : 454, 457 380 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.ಸದರಿ ಪ್ರಕರಣದ ತನಿಖೆ ಕೈಗೊಂಡ ಶ್ರೀ ಅಂಜನ್ ಕುಮಾರ್, ಪಿ.ಐ ದೊಡ್ಡಪೇಟೆ, ವಂಸತ್, ಪಿಎಸ್ಐ, ಮಂಜಮ್ಮ, ಮಪಿಎಸ್ಐ, ಕೃಷ್ಣಕುಮಾರ್ ಮಾನೆ, ಪ್ರೊ ಪಿಎಸ್ಐ, ಶ್ರೀ ಸೈಲ್ ಕೆಂಚಣ್ಣವರ್, ಪ್ರೊ ಪಿಎಸ್ಐ, ಚಂದ್ರಶೇಖರ್ ಎಎಸ್ಐ, ಹಾಗೂ ಸಿಬ್ಬಂಧಿಗಳಾದ ಹೆಚ್.ಸಿ ಪಾಲಾಕ್ಷನಾಯ್ಕ್ ಮತ್ತು ಸಿ.ಪಿ.ಸಿ ಗುರುನಾಯ್ಕ್, ಶಶಿಧರ್ ಸಿ, ಚಂದ್ರಾನಾಯ್ಕ್, ಮನೋಹರ್, ನಿಥಿನ್, ರಮೇಶ್ ರವರುಗಳನ್ನೊಳಗೊಂಡ ತಂಡವು ದಿ 2ರಂದು ಪ್ರಕರಣದ ಆರೋಪಿತನಾದ ಸದ್ದಾಂ ಡಿ, 31 ವರ್ಷ, 1ನೇ ಕ್ರಾಸ್ ಅಣ್ಣಾನಗರ, ಶಿವಮೊಗ್ಗ ಈತನನ್ನು ದಸ್ತಗಿರಿ ಮಾಡಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಮೇಲ್ಕಂಡ ಪ್ರಕರಣವೂ ಸೇರಿದಂತೆ ಒಟ್ಟು 08 ಮನೆಗಳ್ಳತನ ಪ್ರಕರಣಗಳಿಗೆ ಸಂಬಂದಿಸಿದ ಅಂದಾಜು ಮೌಲ್ಯ 7,22,500/- ರೂ ಗಳ 144.50 ಗ್ರಾಂ ತೂಕದ ಬಂಗಾರದ ಆಭರಣಗಳು, ಅಂದಾಜು ಮೌಲ್ಯ 21, 700/- ರೂ ಗಳ 310 ಗ್ರಾಂ ತೂಕದ ಬೆಳ್ಳಿಯ ವಸ್ತುಗಳು, ಒಂದು ಮೊಬೈಲ್ ಫೋನ್, ಒಂದು ವಾಚ್, 2 ಟಿವಿಗಳು ಸೇರಿ ಒಟ್ಟು 7,77,950/- ರೂ ಮೌಲ್ಯದ ವಸ್ತುಗಳನ್ನು ಅಮಾನತ್ತು ಪಡೆಸಿಕೊಂಡಿರುತ್ತಾರೆ.

ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿರುತ್ತಾರೆ.

ವರದಿ ಪ್ರಜಾ ಶಕ್ತಿ…