ಶಿವಮೊಗ್ಗ: ನಗರದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವೆ. ನನ್ನನ್ನು ಅಧಿಕ ಮತಗಳ ಅಂತರದಿAದ ಗೆಲ್ಲಿಸಿ ಎಂದು ಕಾಂಗ್ರೆಸ್ ಅಭ್ಯರ್ಥಿ ಹೆಚ್.ಸಿ. ಯೋಗೀಶ್ ಹೇಳಿದರು.


ಅವರು ಇಂದು ಗೋಪಾಲಗೌಡ ಬಡಾವಣೆಯ ಚಂದನ ಆರೋಗ್ಯ ಪಾರ್ಕ್ನಲ್ಲಿ ಪ್ರಚಾರ ಮಾಡಿ ಮಾತನಾಡಿ, ನಾನು ಕಳೆದ ೧೫ ವರ್ಷಗಳಿಂದ ಪಾಲಿಕೆ ಸದಸ್ಯನಾಗಿ ಕಪ್ಪು ಚುಕ್ಕೆ ಇಲ್ಲದೆ ಕೆಲಸ ಮಾಡಿದ್ದೇನೆ. ನಗರದಲ್ಲಿ ಸುಮಾರು ೪೦೦ಕ್ಕೂ ಹೆಚ್ಚು ಪಾರ್ಕ್ಗಳಿವೆ. ಅವುಗಳ ಅಭಿವೃದ್ಧಿಗೆ ಆದ್ಯತೆ ನೀಡುವೆ ಎಂದರು.
ಕಾAಗ್ರೆಸ್ ಪಕ್ಷ ಗ್ಯಾರಂಟಿ ಕಾರ್ಡ್ಗಳ ಮೂಲಕ ಜನರಿಗೆ ಹತ್ತಿರವಾಗುತ್ತಿದೆ. ಭ್ರಷ್ಟಾಚಾರ, ಕೋಮುವಾದ ಕೊನೆಗೊಳ್ಳಬೇಕು. ಗಲಭೆಮುಕ್ತ ಶಿವಮೊಗ್ಗ ನಿರ್ಮಾಣವಾಗಬೇಕು.

ಜನರು ಶಾಂತಿಯಿAದ ಸಹಬಾಳ್ವೆ ನಡೆಸಬೇಕು. ಎಲ್ಲಾ ಬಡವರಿಗೂ ಮೂಲ ಸೌಲಭ್ಯ ಸಿಗಬೇಕು, ಸಂಸ್ಕೃತಿ, ಆರೋಗ್ಯ, ಶಿಕ್ಷಣ, ಉದ್ಯೋಗ ಹೀಗೆ ಎಲ್ಲಾ ರೀತಿಯ ಅಭಿವೃದ್ಧಿಯಾಗಬೇಕು ಎಂಬ ದೊಡ್ಡ ಉದ್ದೇಶವನ್ನು ಯುವಕನಾಗಿ ಇಟ್ಟುಕೊಂಡಿರುವೆ. ನನಗೆ ಮತ ನೀಡಿ ಗೆಲ್ಲಿಸಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಆರ್. ಪ್ರಸನ್ನಕುಮಾರ್, ಕಲಗೋಡು ರತ್ನಾಕರ್, ನಾಝೀಮಾ, ಜಿ.ಡಿ. ಮಂಜುನಾಥ್, ಶಶಿಧರ್ ಮಾರ್ಟಿಸ್ ಮೊದಲಾದವರು ಇದ್ದರು.

ವರದಿ ಪ್ರಜಾ ಶಕ್ತಿ…