ಶಿವಮೊಗ್ಗ: ಜೆಡಿಎಸ್‌ಗೆ ಬೋವಿ ಸಮಾಜದ ಬಹುತೇಕ ಮುಖಂಡರು ಬೆಂಬಲ ವ್ಯಕ್ತಪಡಿಸಿದ್ದಾರೆ. ಹಾಗೂ ಶಿವಮೊಗ್ಗ ನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಅವರಿಗೆ ಸಂಪೂರ್ಣ ಬೆಂಬಲ ನೀಡುತ್ತಾರೆ ಎಂದು ಬೋವಿ ಸಮಾಜದ ತಾಲೂಕು ಅಧ್ಯಕ್ಷ ಹಾಗೂ ಪಾಲಿಕೆ ಸದಸ್ಯ ಧೀರರಾಜ್ ಹೊನ್ನವಿಲೆ ಹೇಳಿದ್ದಾರೆ.


ಅವರು ಇಂದು ಜೆಡಿಎಸ್ ಅಭ್ಯರ್ಥಿಯ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬೋವಿ ಸಮಾಜಕ್ಕೆ ಎರಡೂ ರಾಷ್ಟಿçÃಯ ಪಕ್ಷಗಳು ಅನ್ಯಾಯ ಮಾಡಿವೆ. ಹಿಂದೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣವಾಗಿದ್ದ ಗೂಳಿಹಟ್ಟಿ ಶೇಖರ್, ಶಿವರಾಜ ತಂಗಡಗಿ ಮತ್ತು ವೆಂಕಟರಮಣಪ್ಪ ಅವರನ್ನು ಎರಡೂ ಪಕ್ಷಗಳು ನಿರ್ಲಕ್ಷಿಸಿವೆ ಎಂದು ದೂರಿದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಬೋವಿ ಸಮಾಜದ ಕೊಡುಗೆ ಇದೆ. ಹಿಂದಿನಿAದಲೂ ಬೋವಿ ಸಮಾಜಕ್ಕೆ ಎಂಎಲ್‌ಎ ಟಿಕಟ್ ನೀಡಲು ನಿರಾಕರಿಸುತ್ತಾ ಬಂದಿರುವ ಬಿಜೆಪಿ ನಾನು ಪಕ್ಷೇತರನಾಗಿ ಪಾಲಿಕೆ ಸದಸ್ಯನಾಗಿ ಗೆದ್ದುಬಂದಾಗ ಬಿಎಸ್‌ವೈ ಮತ್ತು ಈಶ್ವರಪ್ಪನವರು ೨೦೨೩ರಲ್ಲಿ ಎಂಎಲ್‌ಎ ಟಿಕಟ್ ನೀಡುವ ಭರವಸೆ ನೀಡಿದ್ದರು. ಪಾಲಿಕೆಯಲ್ಲಿ ಕೂಡ ಮೇಯರ್ ಸ್ಥಾನ ನೀಡುವ ಸಂದರ್ಭದಲ್ಲಿ ಈಗಿನ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪನವರು ಅಡ್ಡಗಾಲಿಟ್ಟು ನನಗೆ ಮೇಯರ್ ಸ್ಥಾನ ಸಿಗದಂತೆ ಕುತಂತ್ರ ಮಾಡಿದ್ದರು.

ಅವರು ಶಾಡೋ ಮೇಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಬೋವಿ ಸಮಾಜ ಬಿಜೆಪಿಯವರಿಗೆ ಲೆಕ್ಕಕಿಕಿಲ್ಲ ನಿರಂತರವಾಗಿ ಬೋವಿ ಸಮಾಜದ ಮುಖಂಡರನ್ನು ತುಳಿಯುವ ಕೆಲಸ ಬಿಜೆಪಿ ಮಾಡುತ್ತಾ ಬಂದಿದೆ ಎಂದು ಆರೋಪಿಸಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಬೋವಿ ಸಮಾಜ ಎರಡೂ ರಾಷ್ಟಿçÃಯ ಪಕ್ಷಗಳಿಗೆ ತಕ್ಕ ಪಾಠ ಕಲಿಸಲಿದ್ದು, ಶಿವಮೊಗ್ಗ ಗ್ರಾಮಾಂತರ ಮತ್ತು ಶಿವಮೊಗ್ಗ ನಗರ ಮತ್ತು ಭದ್ರಾವತಿ ಕ್ಷೇತ್ರಗಳಲ್ಲಿ ಜೆಡಿಎಸ್ ಬೆಂಬಲಿಸಲಿದೆ ಎಂದು ಅವರು, ನನಗೆ ಬಿಜೆಪಿ ಬಿಡುವ ಮನಸ್ಸಿರಲಿಲ್ಲ. ಎರಡೂ ರಾಷ್ಟಿçÃಯ ಪಕ್ಷಗಳು ಸಮಾಜವನ್ನು ನಿರ್ಲಕ್ಷಿಸುತ್ತಿರುವುದರಿಂದ ಎರಡೂ ಪಕ್ಷಗಳನ್ನು ಸೋಲಿಸುವ ಉದ್ದೇಶದಿಂದ ಅನಿವಾರ್ಯವಾಗಿ ಜೆಡಿಎಸ್‌ಗೆ ಬೆಂಬಲಿಸುವ ನಿರ್ಧಾರಕ್ಕೆ ಬಂದಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹುಚ್ಚುರಾಯಪ್ಪ, ಗಣೇಶ್, ರಾಘವೇಂದ್ರ, ವಿಜಯಕುಮಾರ್, ಗೋಪಾಲಕೃಷ್ಣ, ಸಂತೋಷ್‌ಕುಮಾರ್ ಮತ್ತಿತರರಿದ್ದರು.

ವರದಿ ಪ್ರಜಾ ಶಕ್ತಿ…