ಬಿಜೆಪಿ ಶಿವಮೊಗ್ಗ ಗ್ರಾಮಾಂತರ ಮಂಡಲ ಸಂಘಟನಾ ಪರ್ವದ ನೂತನ ಪದಾಧಿಕಾರಿಗಳ ಸಮಾರಂಭ ವನ್ನು ಸಂಸದರಾದ ಬಿ ವೈ ರಾಘವೇಂದ್ರ ಗ್ರಾಮಾಂತರ ಮಾಜಿ ಶಾಸಕರಾದ ಅಶೋಕ್ ನಾಯಕ್  ಒಳಗೊಂಡಂತೆ ಹಲವು ಮುಖಂಡರು ಪದಾಧಿಕಾರಿಗಳು ಮತ್ತು ಪಕ್ಷದ ಕಾರ್ಯಕರ್ತರ ಸಮ್ಮುಖದಲ್ಲಿ ಕಾರ್ಯಕ್ರಮ ನೆರವೇರಿಸಿದರು.

ಕಾರ್ಯಕ್ರಮವನ್ನು ಪದಾಧಿಕಾರಿಗಳು ಅನೇಕ ಹಲವು ವಿಚಾರಗಳನ್ನು ತಿಳಿಸುತ್ತಾ ನೂತನ ಪದಾಧಿಕಾರಿಗಳಿಗೆ  ಧೈರ್ಯವನ್ನು ತುಂಬಿ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಸಂಸದ ಬಿ ವೈ ರಾಘವೇಂದ್ರ ಮಾತನಾಡಿ ಸೆಲ್ಫಿ ವಿತ್ ಲಾಬಾಕಿ ಎಂದರೆ ಕಿಸಾನ್ ಸಮ್ಮಾನ್ ಯೋಜನೆ ವಿಶ್ವಕರ್ಮ ಯೋಜನೆ ಫಸಲ್ ಯೋಜನೆ ಮತ್ತು ಹಲವು ಯೋಜನೆಗಳ ಮಾಹಿತಿಯನ್ನು ಸೆಲ್ಫಿ ವಿತ್ ಲಾಬಾಕಿ ಎಂದು ಹೇಳಿದರು.

“ಸರಳ”ಎಂಬ ಆಪ್ ನಲ್ಲಿ ಹಲವು ಮಾಹಿತಿ ಇದ್ದು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮಕ್ಕಳ ತಜ್ಞರಾದ ಡಾಕ್ಟರ್ ಧನಂಜಯ ಸರ್ಜಿ ಅವರು ಮಾಹಿತಿಯನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷರು ಸೇರಿದಂತೆ ಹಲವು ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ : ಸಂತೋಷ್ ರಾಮ್