ಲೋಕಸಭಾ ಚುನಾವಣೆ – 2024 ರ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶ್ರೀ ನಾಗರಾಜ್ ಪೊಲೀಸ್ ಉಪಾಧೀಕ್ಷಕರು, ಭದ್ರಾವತಿ ಉಪ ವಿಭಾಗ ಮತ್ತು ಶ್ರೀಮತಿ ಶೋಭಿತಾ ಪೊಲೀಸ್ ನಿರೀಕ್ಷಕರು, ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಮಹಿಳಾ ತುಕಡಿ) ರವರ ನೇತೃತ್ವದಲ್ಲಿ ಕೇಂದ್ರೀಯ ಮೀಸಲು ಪಡೆ ಮತ್ತು ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ 30ರಂದು ಬೆಳಗ್ಗೆ ಭದ್ರಾವತಿ ನಗರದಲ್ಲಿ ಪೊಲೀಸ್ ಪಥ ಸಂಚಲನವನ್ನು ( ರೂಟ್ ಮಾರ್ಚ್) ಹಮ್ಮಿಕೊಂಡಿದ್ದು,

ಸದರಿ ಪಥಸಂಚನವನ್ನು ಹಳೆ ನಗರ ಪೊಲೀಸ್ ಠಾಣೆ ಯಿಂದ ಪ್ರಾರಂಭಿಸಿ ಹೊಳೆಹೊನ್ನೂರು ವೃತ್ತ, ಖಾಜಿ ಮೊಹಲ್ಲಾ, ಬಸವೇಶ್ವರ ವೃತ್ತ, ಮಾಧವಚಾರ್ ವೃತ್ತ, ಚೌಕ್ ಮಸೀದಿ, ಬೂತನಗುಡಿ, ರಂಗಪ್ಪ ವೃತ್ತದಿಂದ ಅನ್ವರ್ ಕಾಲೋನಿಗೆ ಬಂದು ಮುಕ್ತಾಯ ಮಾಡಲಾಯಿತು. ಸದರಿ ಪಥ ಸಂಚನದಲ್ಲಿ ಶ್ರೀ ಶ್ರೀಶೈಲ ಕುಮಾರ್ ವೃತ್ತ ನಿರೀಕ್ಷಕರು ಭದ್ರಾವತಿ ನಗರ ವೃತ್ತ, ಪೊಲೀಸ್ ಉಪ ನಿರೀಕ್ಷಕರಾದ ಶ್ರೀಮತಿ ಸ್ವಾತಿ, ಶ್ರೀ ಶಿವಕುಮಾರ, ಶ್ರೀ ಕೃಷ್ಣ ಕುಮಾರ್, ಶ್ರೀಮತಿ ಶೈಲಾಶ್ರೀ ಮತ್ತು ಭದ್ರಾವತಿ ನಗರ ವೃತ್ತದ ಅಧಿಕಾರಿ ಸಿಬ್ಬಂಧಿಗಳು ಹಾಗೂ ಕೇಂದ್ರ ಮೀಸಲು ಪಡೆ(ಮಹಿಳಾ ತುಕಡಿ)ಯ ಅಧಿಕಾರಿ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.

ವರದಿ ಪ್ರಜಾ ಶಕ್ತಿ