ಶಿವಮೊಗ್ಗ ನಗರದ ಬಂಟರ ಭವನದಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಿದರು. ವಿಶೇಷವಾಗಿ ಮೂರು ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿರುವ ಕೆ ಎಸ್ ಆರ್ ಟಿ ಸಿ ಬಸ್ಸಿನ ಲೇಡಿ ಕಂಡಕ್ಟರ್ ಭಾಗ್ಯಮ್ಮ , ಅಂಚೆ ಕಚೇರಿಯ ವಿತರಕರು ಸುಲೋಚನ ಮತ್ತು ಹೋಟೆಲ್ ವ್ಯವಹಾರ ನಡೆಸುತ್ತಿರುವ ಸುಮಿತ್ರ ಸುಧೀರ್ ಶೆಟ್ಟಿ ಮಹಿಳೆಯರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ಮಹಿಳಾ ಅಧ್ಯಕ್ಷರಾದ ಪುಷ್ಪ ಶೆಟ್ಟಿ ಮಾತನಾಡಿ ಶಿವಮೊಗ್ಗದಲ್ಲಿ ಬಹುದಿನದ ಕನಸು ಬಂಟರ ಭವನ ಈಗ ನನಸಾಗಿದೆ. ಈ ಬಂಟರ ಭವನದಲ್ಲಿ ಮಹಿಳಾ ಮೊದಲ ಕಾರ್ಯಕ್ರಮದಲ್ಲಿ ಮೂರು ವಿಭಿನ್ನ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿರುವ ವಿಶೇಷ ಮಹಿಳೆಯರನ್ನು ಅವರು ಮಾಡುವ ಕೆಲಸವನ್ನು ಗುರುತಿಸಿ ಸನ್ಮಾನಿಸುವ ಮೂಲಕ ಮಹಿಳಾ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಿದ್ದೇವೆ.ಮುಂದಿನ ದಿನಗಳಲ್ಲಿ ಇನ್ನು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತೇವೆ ಎಂದರು.

ಡಾ. ಸತೀಶ್ ಕುಮಾರ್ ಶೆಟ್ಟಿ ಮಾತನಾಡಿ ಬಂಟರ ಭವನದಲ್ಲಿ ಮೊದಲನೆಯ ಮಹಿಳಾ ದಿನಾಚರಣೆ ಕಾರ್ಯಕ್ರಮ ವಿಶೇಷವಾಗಿ ಮತ್ತು ವಿಭಿನ್ನವಾಗಿ ನಡೆಸಿದ್ದಾರೆ. ಮಹಿಳಾ ತಂಡಕ್ಕೆ ಶುಭವಾಗಲಿ ಎಂದು ಹಾರೈಸಿ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸಮಾಜಮುಖಿ ಕೆಲಸಗಳನ್ನು ಮಾಡಲಿ ಎಂದು ಆಶಿಸುತ್ತೇನೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ವಿಶೇಷ ಮಹಿಳೆಯರು ನಾವು ಈ ಸಮಾಜದಲ್ಲಿ ಮಾಡುವ ಕೆಲಸ ನಮಗೆ ಮತ್ತು ನಮ್ಮ ಮನೆಯವರಿಗೆ ಹೆಮ್ಮೆಯ ವಿಷಯ ಎಂದರು. ನಮ್ಮನ್ನು ಕರೆಸಿ ಕಾರ್ಯಕ್ರಮದಲ್ಲಿ ಸನ್ಮಾನಿಸಿದ ಶಿವಮೊಗ್ಗ ಮಹಿಳಾ ಬಂಟ್ಸ್ ವಿಭಾಗಕ್ಕೆ ಧನ್ಯವಾದಗಳು ಎಂದರು.

ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ vinni Mathew ಶಿವಮೊಗ್ಗ ಮಹಿಳಾ ಬಂಟ್ಸ್ ಗೌರವಾಧ್ಯಕ್ಷರಾದ ಡಾ.ಅಮಿತಾ ಹೆಗಡೆ ಅಧ್ಯಕ್ಷರಾದ ಪುಷ್ಪ ಶೆಟ್ಟಿ ಉಪಾಧ್ಯಕ್ಷರಾದ ಪ್ರಭಾವತಿ ಶೆಟ್ಟಿ ಕಿಲಕ ಶೆಟ್ಟಿ ಪ್ರಧಾನ ಕಾರ್ಯದರ್ಶಿಯಾದ ವಾತ್ಸಲ್ಯ ಶೆಟ್ಟಿ ಸಹ ಕಾರ್ಯದರ್ಶಿಯಾದ ಶೃತಿ ಶೆಟ್ಟಿ ಖಜಾಂಚಿ ಜ್ಯೋತಿ ಶೆಟ್ಟಿ ನಿರ್ದೇಶಕರು ಮತ್ತು ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿರಿದ್ದರು.

ವರದಿ ಪ್ರಜಾ ಶಕ್ತಿ