“ಭೋರ್ಗರೆದ ಅಂಬ್ಲಿಗೋಳ ಜಲಾಶಯ – ಶಿವಶರಣರ ನಾಡಿನಲ್ಲಿ ಮೂಡಿದ ಸಂತಸ”

ತುಂಗಾ ಜಲಾಶಯ ಹಿನ್ನೀರಿನ ಪ್ರದೇಶದಲ್ಲಿ ಹಾಗೂ ಶಿಕಾರಿಪುರ ವ್ಯಾಪ್ತಿಯಲ್ಲಿ ಧರೆಗಿಳಿದ ಉತ್ತಮ ವರ್ಷಧಾರೆಯಿಂದ ತಾಲ್ಲೂಕಿನ ಮತ್ತೊಂದು ಬಹುಮುಖ್ಯ ರೈತನ ಜೀವನಾಡಿಯಾದ “ಅಂಬ್ಲಿಗೋಳ ಜಲಾಶಯ” ಮೈದುಂಬಿ ತನ್ನ ಜೀವಕಳೆ ಮರಳಿ ಪಡೆದಿದ್ದು ಜಲಸಂಪನ್ಮೂಲ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ “ಬಾಗಿನ ಸಮರ್ಪಣೆ” ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಧ್ಯಕ್ಷ ಶಾಸಕರಾದ ಶ್ರೀ ಬಿ ವೈ ವಿಜಯೇಂದ್ರ ಮತ್ತು ಸಂಸದರಾದ ಬಿ ವೈ ರಾಘವೇಂದ್ರ ದಂಪತಿ ಸಮೇತರಾಗಿ ಜಲಾಶಯಕ್ಕೆ ಬಾಗಿನ ಸಮರ್ಪಿಸಲಾಯಿತು.

ಈ ಸಂದರ್ಭದಲ್ಲಿ ಮುಖಂಡರಾದ ಶ್ರೀ ಗುರುಮೂರ್ತಿ ಅವರು, ಶ್ರೀ ಹುಲ್ಮಾರು ಮಹೇಶ್ ಅವರು, ಶ್ರೀ ಹನುಮಂತಪ್ಪ ಅವರು, ಶ್ರೀ ಕಪ್ಪನಹಳ್ಳಿ ಬಸವರಾಜಪ್ಪ ಅವರು, ಶ್ರೀ ಮಾಜಿ ರಾಘವೇಂದ್ರ ಅವರು, ಶ್ರೀ ಶೇಖರಪ್ಪ ಅವರು, ಶ್ರೀ ವೀರೇಂದ್ರ ಪಾಟೀಲ್ ಅವರು, ಶ್ರೀ ಮಧು ಅವರು, ಶ್ರೀ ಬಸವರಾಜ ಅವರು ಸೇರಿದಂತೆ ತಾಲ್ಲೂಕಿನ ಎಲ್ಲಾ ಪ್ರಮುಖ ಗಣ್ಯರು ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ