ದಿನಾಂಕ 21.07.2024 ರಂದು ಗುರು ಪೂರ್ಣಿಮೆಯ ಪ್ರಯುಕ್ತ ಶಿವಮೊಗ್ಗದ ಸಂಸದರಾದ ಸನ್ಮಾನ್ಯ ಶ್ರೀ B.Y ರಾಘವೇಂದ್ರ ರವರು ವಿಶೇಷವಾಗಿ ಅಯ್ಯಪ್ಪ ಗುರುಗಳಾದ ಶ್ರೀ ಶಬರೀಶ್ ಸ್ವಾಮಿ ರವರನ್ನು ತಮ್ಮ ನಿವಾಸದಲ್ಲಿ ಆಹ್ವಾನಿಸಿ ಆಶೀರ್ವಾದವನ್ನು ಪಡೆದುಕೊಂಡರು.
ಈ ಸಂದರ್ಭದಲ್ಲಿ ಚೆನ್ನೈ ನಗರದಿಂದ ಪ್ರತಿಷ್ಠಿತ ಹಾಗೂ ಮಾಹಿತಿ ತಂತ್ರಜ್ಞಾನದ ಉದ್ಯಮಿಗಳಾದ ಶ್ರೀ ಸುರೇಶ್, ಶ್ರೀಮತಿ ಜಯಶ್ರೀ, ಶ್ರೀ ಶ್ರೀ ರೋಜಾ ಗುರೂಜಿ ಇಂಟ್ನ್ಯಾಷನಲ್ ಟ್ರಸ್ಟ್ ಮತ್ತು ಚೆನ್ನೈ ಯಲ್ಲಿ ಹೊಸದಾಗಿ ಆರಂಭಗೊಂಡಿರುವ ಶ್ರೀ ಶ್ರೀ ಶಬರೀಶ್ ಗುರೂಜಿ ಟ್ರಸ್ಟ್ ನ ವ್ಯವಸ್ಥಾಪಕರು, ಟ್ರಸ್ಟೀ ಗಳು ಮತ್ತು ಕರ್ನಾಟಕ ರಾಜ್ಯಾದ್ಯಂತ ಶ್ರೀ ಅಯ್ಯಪ್ಪ ಸ್ವಾಮಿಯ ಶಿಷ್ಯ ವೃಂದ ದವರಾದ ಪ್ರೀತಿ, ಗೌರಿ, ಗುರುಮೂರ್ತಿ, ಶಶಿ ಕುಮಾರ್, ವೆಂಕಟೇಶ್, ಮಣಿಕಂಠನ್, ದೊರೈ ರಾಜ್, ಯುವರಾಜ್, ಕೃಷ್ಣ ಆಗಮಿಸಿದ್ದರು. ಹಾಗೆಯೇ ಹೊಸದಾಗಿ ಬಿಡುಗಡೆಯಾದ ಶ್ರೀ ಅಯ್ಯಪ್ಪ ಸ್ವಾಮಿಯ ಮಹಿಮೆಯ ಕುರಿತ ಆಂಗ್ಲ ಪುಸ್ತಕವಾದ ‘ ಬಿಯಾಂಡ್ ದಿ ಹೀಲ್ಸ್ ‘ ಅನ್ನು ಶ್ರೀ ಸಂದೇಶ್ ರೋಜಾ ಷಣ್ಮುಗಂ ರವರು ಸಂಸದರಿಗೆ ನೀಡಿದರು.
ಮುಂದಿನ ದಿನಗಳಲ್ಲಿ ಶಿವಮೊಗ್ಗ ನಗರದಲ್ಲಿ ಯುವಕರಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಭಂದಿಸಿದ ಹಲವು ಯೋಜನೆಗಳ ಕಾರ್ಯರೂಪಗೊಳಿಸುವ ಕುರಿತು ಚರ್ಚಿಸಲಾಯಿತು.