ಶಿವಮೊಗ್ಗ ಕುರುಬರ ಸಂಘದ ವತಿಯಿಂದ ನಗರದ ಬಾಲರಾಜ ಅರಸ್ ರಸ್ತೆಯಲ್ಲಿ “ನೂತನ ಸಮುದಾಯಭವನ ಕಟ್ಟಡದ ಗುದ್ದಲಿ ಪೂಜೆಯನ್ನು” ಇಂದು ಬೆಳಿಗ್ಗೆ ಕುರುಬರ ಸಂಘದ ಅಧ್ಯಕ್ಷರಾದ ಶ್ರೀ.ಪಿ.ಮೈಲಾರಪ್ಪನವರ ಅಧ್ಯಕ್ಷತೆಯಲ್ಲಿ ನೆರವೇರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಸಮಾಜದ ಹಿರಿಯರು ಹಾಗೂ ಮಾಜಿ ವಿಧಾನಪರಿಷತ್ ಸದಸ್ಯರಾದ ಶ್ರೀ.ಆರ್.ಪ್ರಸನ್ನಕುಮಾ‌ರ್, ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀ.ಎಸ್.ಕೆ.ಮರಿಯಪ್ಪನವರು, ಶ್ರೀ.ಎಸ್.ಹನುಮಂತಪ್ಪ ಸಿದ್ದೇಶ್ವರಪ್ಪ(ಬಿ.ಡಿ.ಎಂ.), ಎಸ್.ಕೆ.ಲೋಕೇಶ್, ಎಂ.ಗಣೇಶ್, ಸಿ.ಹೊನ್ನಪ್ಪ, ಬಿಜಿಲಿ ಹನುಮಂತಪ್ಪ, ಕೆ.ಲಕ್ಷ್ಮಣ್, ಕುಂಸಿ ರಾಮಣ್ಣ, ಕೃಷ್ಣಮೂರ್ತಿ ಕೆ. ಗೌರಿಶಂಕರ, ಪ್ರಭಾಕರ,ಎಸ್.ಟಿ.ವಾಸುದೇವ, ಪಿ.ಬಾಲಪ್ಪ, ನವುಲೆ ಈಶ್ವರಪ್ಪ, ದೊಡ್ಡಪ್ಪ, ಕರಿಯಪ್ಪ, ರಾಜ್ಯ ಕುರುಬರ ಸಂಘದ ಉಪಾಧ್ಯಕ್ಷ ಕೆ.ರಂಗನಾಥ್, ರಾಜ್ಯ ನಿರ್ದೇಶಕರಾದ ಡಾ:ಸೌಮ್ಯಪ್ರಶಾಂತ್ ಹಾಗೂ ಸಮಾಜದ ಬಂಧುಗಳು ಉಪಸ್ಥಿತರಿದ್ದರು.