ರಾಷ್ಟ್ರೀಯ ಶಿಕ್ಷಣ ಸಮಿತಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ನೂತನ ಹಾಸ್ಟೆಲ್ ಕಟ್ಟಡದ ಶಂಕುಸ್ಥಾಪನಾ ಕಾರ್ಯಕ್ರಮ ಇಂದು ಎನ್.ಇ.ಎಸ್ ಬಡಾವಣೆಯಲ್ಲಿ ಅದ್ದೂರಿಯಿಂದ ನೆರವೇರಲ್ಪಟ್ಟಿತು.

ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಶ್ರೀ ಜಿ ಎಸ್ ನಾರಾಯಣರಾವ್ ಇವರು ಭೂಮಿ ಪೂಜೆಯಲ್ಲಿ ಪಾಲ್ಗೊಂಡು ಶಿಲಾನ್ಯಾಸ ನೆರವೇರಿಸಿದರು. ಈ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳಾದ ಶ್ರೀ ಎಸ್ ಎನ್ ನಾಗರಾಜ್ ಮತ್ತು ನಿರ್ದೇಶಕರಾದ ಶ್ರೀ ಟಿ ಆರ್ ಅಶ್ವತ್ ನಾರಾಯಣ ಶೆಟ್ಟಿ ಇವರುಗಳು ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಷ್ಟ್ರೀಯ ಶಿಕ್ಷಣ ಸಮಿತಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷರಾದ ಡಾ. ಎ. ಸತೀಶ್ ಕುಮಾರ್ ಶೆಟ್ಟಿ ಇವರು ವಹಿಸಿದ್ದರು.

ಶಂಕು ಸ್ಥಾಪನಾ ಕಾರ್ಯಕ್ರಮದಲ್ಲಿ ಪುರೋಹಿತರಾದ ಅನಿರುದ್ಧ ಕಟ್ಟೆ ಆಚಾರ್ ಗೃಹ ನಿರ್ಮಾಣ ಸಹಕಾರ ಸಂಘದ ಉಪಾಧ್ಯಕ್ಷರಾದ ಶ್ರೀ ಮೃತ್ಯುಂಜಯ ಹಿರೇಮಠ್, ಕಾರ್ಯದರ್ಶಿಗಳಾದ ಪ್ರೊ. ಬಿ.ಆರ್.ದಯಾನಂದ ಖಜಾಂಚಿಗಳಾದ ಶ್ರೀ ಹೆಚ್ ಬಿ ಮಡಿವಾಳರ್, ನಿರ್ದೇಶಕರುಳಾದ ಎಂ.ಜಿ.ಕೆ. ರಂಗಪ್ಪ, ಡಾ. ಪ್ರಕಾಶ್, ಪದ್ಮಾವತಿ, ಭಾಗ್ಯ, ಗುರುರಾಜ್, ಬಸವರಾಜ್, ಚೂಡೇಗೌಡ, ಸುರೇಶ್, ಕಟ್ಟಡದ ಇಂಜಿನಿಯರ್ ಶ್ರೀ ಉಲ್ಲಾಸ ಹೆಗ್ಡೆ, ವ್ಯವಸ್ಥಾಪಕರಾದ ಶ್ರೀ ಪ್ರಭಾಕರ್ ಹಾಗೂ ಸಂಘದ ಗೌರವಾನ್ವಿತ ಸದಸ್ಯರುಗಳು ಭಾಗವಹಿಸಿದ್ದರು.

ವರದಿ ಪ್ರಜಾ ಶಕ್ತಿ