1. ಶ್ರೀ ಸಿ ಆರ್ ಕೊಪ್ಪದ್, ಪಿಎಸ್ಐ, ಕೋಟೆ ಪೊಲೀಸ್ ಠಾಣೆ, 2. ಶ್ರೀ ಡಿ ಕೃಷ್ಣಮೂರ್ತಿ , ಎಎಸ್ಐ , ಮಾಳೂರು ಪೊಲೀಸ್ ಠಾಣೆ, 3. ಶ್ರೀ ರತ್ನಾಕರ್ ಎಂ, ಎಎಸ್ಐ , ಹೊಸನಗರ ಪೊಲೀಸ್ ಠಾಣೆ, 4. ಶ್ರೀ ಅರುಣಕುಮಾರ್ ಎಂ ವಿ, ಎಎಸ್ಐ, ಭದ್ರಾವತಿ ಗ್ರಾಮಾಂತರ ಠಾಣೆ, 5. ಶ್ರೀ ಮೋಹನ್ ಕುಮಾರ್ ಎನ್ ವಿ ಎಆರ್ಎಸ್ಐ, ಡಿಎಆರ್ ಶಿವಮೊಗ್ಗ ಮತ್ತು 6. ಶ್ರೀ ವೆಂಕೋಬರಾವ್ ಕೆ, ಎಆರ್ಎಸ್ಐ ಡಿ ಎ ಆರ್ ಶಿವಮೊಗ್ಗ ಇವರುಗಳು ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಸುಧೀರ್ಘ ಸೇವೆಯನ್ನು ಸಲ್ಲಿಸಿ ದಿನಾಂಕಃ 31-05-2025 ರಂದು ವಯೋನಿವೃತ್ತಿಯನ್ನು ಹೊಂದಿದ್ದು, ಇವರಿಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಶ್ರೀ ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, - 1 ಶಿವಮೊಗ್ಗ ಜಿಲ್ಲೆ ರವರು ನೆನಪಿನ ಕಾಣಿಕೆಯನ್ನು ನೀಡಿ ಸನ್ಮಾನಿಸಿ ಮುಂದಿನ ನಿವೃತ್ತಿ ಜೀವನವು ಸುಖಕರವಾಗಿರಲಿ ಎಂದು ಶುಭ ಕೋರಿ ಬೀಳ್ಕೊಡುಗೆ ನೀಡಿದರು.
ಈ ಸಂದರ್ಭದಲ್ಲಿ ಶ್ರೀ ಸತೀಶ್, ಎ ಎ ಓ, ಶಿವಮೊಗ್ಗ ಮತ್ತು ಶ್ರೀ ಎಂ ಎಂ ಮಾಳಗಿ ಮತ್ತು ಶ್ರೀ ಅರುಣ್ ಶಾಖಾಧೀಕ್ಷಕರು ಜಿಲ್ಲಾ ಪೊಲೀಸ್ ಕಛೇರಿ ಶಿವಮೊಗ್ಗ ರವರು ಉಪಸ್ಥಿತರಿದ್ದರು
.