ಶಿವಮೊಗ್ಗ ಬಾರ್ ಅಸೋಸಿಯೇಷನ್…
ತೀರ್ಥಹಳ್ಳಿ ವಕೀಲ ಸಂಘದ ಸದಸ್ಯರಾದ ಮಧುಕರ್ ಮಯ್ಯ ರವರ ಮೇಲೆ ಹಲ್ಲೆ ಖಂಡಿಸಿ ಶಿವಮೊಗ್ಗ ಬಾರ್ ಅಸೋಸಿಯೇಷನ್ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ತೀರ್ಥಹಳ್ಳಿ ವಕೀಲರ ಸಂಘದ ಸದಸ್ಯರಾದ ಮಧುಕರ್ ಮಯ್ಯ ರವರ ಮೇಲೆ ದುಷ್ಕರ್ಮಿಗಳು ಮಾರಾಕಸ್ತ್ರಗಳಿಂದ ಮರಣಾಂತಿಕ ಹಲ್ಲೆ ನಡೆಸಿದ್ದು , ಅದನ್ನು ನಮ್ಮ ಸಂಘವು ತೀರ್ವವಾಗಿ ಖಂಡಿಸುತ್ತದೆ.ಈ ಕೃತ್ಯದಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಹಾಗೂ ಹಲ್ಲೆಗೊಳಗಾದ ತೀರ್ಥಳ್ಳಿಯ ವಕೀಲರ ಸಂಘದ ಸದಸ್ಯರಾದ ಮಧುಕರ್ ಮಯ್ಯ ರವರಿಗೆ ಸೂಕ್ತ ಭದ್ರತೆಯನ್ನು ಕೊಟ್ಟು ಪದೇ ಪದೇ ವಕೀಲರ ಮೇಲೆ ಆಗುತ್ತಿರುವ ಹಲ್ಲೆಗಳನ್ನು ಸೂಕ್ತ ರಕ್ಷಣೆಯನ್ನು ಕೊಡಬೇಕೆಂದು ಮನವಿ ಸಂದರ್ಭದಲ್ಲಿ ವಿನಂತಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ರಾಘವೇಂದ್ರ ಪ್ರಧಾನ ಕಾರ್ಯದರ್ಶಿಯಾದ ಶ್ರೀನಿವಾಸ್ ಖಜಾಂಚಿ ಮಾಲತೇಶ್ ಉಪಾಧ್ಯಕ್ಷರಾದ ಕೀಲಕ ಕುಮಾರಿ ನಂದಿನಿದೇವಿ ಸಹ ಕಾರ್ಯದರ್ಶಿಯಾದ ಜಗದೀಶ್ ಸಾಂಸ್ಕೃತಿಕ ಕಾರ್ಯದರ್ಶಿ ಜನಾರ್ಧನ್ ಕ್ರೀಡಾ ಕಾರ್ಯದರ್ಶಿ ನಿರಂಜನ್ ಮೋಹಿತ್ ಪ್ರಚಾರ ಸಮಿತಿ ಕಾರ್ಯದರ್ಶಿ ಅತ್ತಾವುಲ್ಲ ಖಾನ್ ಮುಂತಾದವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.