ಬಗರ್ ಹುಕುಂ ಸಕ್ರಮೀಕರಣ ಸಮಿತಿ ವತಿಯಿಂದ ಸಾಗುವಳಿ ಮಂಜೂರು ಮಾಡಲು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಬಗರು ಹುಕುಂ ಸಾಗುವಳಿದ ರರಿಗೆ ಸಾಗುವಳಿ ಮಂಜೂರು ಮಾಡಲು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಸುಮಾರು 30 40 ವರ್ಷಗಳಿಂದ ಕೃಷಿಯನ್ನೇ ಅವಲಂಬಿಸಿ ಜೀವನ ನಡೆಸುತ್ತಿರುವ ರೈತರು1990-1991,1998-99 ರವರೆಗೆ ಫಾರಂ ನಂಬರ್ 50 ,53 ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದು ಈಗಾಗಲೇ ಬಗರಕುಂ ಸಮಿತಿ ರಚನೆಯಾಗಿದ್ದು ಉಪ ವಿಭಾಗಾಧಿಕಾರಿಗಳು ಮೇಲ್ಮನವಿಯಲೂ ಸಹ ಅನುಮತಿಯನ್ನು ಪಡೆದಿದ್ದು ಸದರಿ ಅನುಮತಿ ಪತ್ರ ಗ್ರಾಮ ಲೆಕ್ಕಾಧಿಕಾರಿಗಳ ವರದಿಗೆ ಹೋದ ನಂತರ ವರದಿ ನೀಡದೆ ಜಿಲ್ಲಾಧಿಕಾರಿ ಗಳಾದ ತಮ್ಮಮೇಲೆ ನೆಪ ಹೊಡ್ಡಿ ನಿರಾಕರಿಸುತ್ತಿದ್ದರೆ.

ಸರ್ಕಾರ ಸುತ್ತೋಲೆಯಂತೆ ಫಾರಂ-57ರಡಿಯ ಲ್ಲಿ ಅರ್ಜಿ ಸಲ್ಲಿಸಿದ್ದ ರೈತರಿಗೆ ಮಾತ್ರ 10 ಕಿ. ಮೀ ನಗರ ವ್ಯಾಪ್ತಿ ಇರುವುದರಿಂದ ವರದಿ ನೀಡಬಾರದೆಂದು ಸರ್ಕಾರದ ಆದೇಶವಿದೆ.ಈ ಆದೇಶವು 50,53 ಅರ್ಜಿಗೆ ಅನ್ವಯಿಸುವುದಿಲ್ಲ. ಹಾಗೂ ಈ ಇಂದೆ ಸರ್ವೇ ಇಲಾಖೆ ಯವರು ನೀಡಿದ ವರದಿಯು ಅವೈಜ್ಞಾನಿಕವಾಗಿದ್ದು,ವರದಿಯನ್ನು ಪುನರ್ ಪರಿಶೀಲಿಸಿ ಹಾಗೂ 50, 530ಅರ್ಜಿಯನ್ನು ಪರಿಗಣಿಸಿ ರೈತರಿಗೆ ಸಾಗುವಳಿ ನೀಡುವಂತೆ ಸೂಕ್ತ ಅಧಿಕಾರಿಗಳಿಗೆ ಆದೇಶ ನೀಡಬೇಕಾಗಿ ಮನವಿ ಮಾಡಿದರು.

ಸಂದರ್ಭದಲ್ಲಿ ಎಸ್ ಗಿರೀಶ್ ಸದಸ್ಯರು ಬಗರ್ ಹುಕುಂ ಸಮಿತಿ ಶಿವಮೊಗ್ಗ. ಈ ಸಂಧರ್ಭದಲ್ಲಿ ಕಲಗೋಡು ರತ್ನಾಕರ್ ನಾಗೇಂದ್ರಪ್ಪ ಫಾರಂ, ಸೊಗನೆ ಕೃಷ್ಣಪ್ಪ, ಪ್ರವೀಣ್, ಮಧು ಸೂಧನ್, ವೇಲು ಕಲ್ಲಾಪುರ ಮಂಜಣ್ಣ, ವೆಂಕಟೇಶ್, ಕಟೀಕೆರೆ ಹುಚ್ಚಪ್ಪ, ಮಂಜುನಾಥ್, ಸಂಜಯ್, ಮಂಜನಾಯ್ಕ್ ಕಲ್ಲಾಪುರ, ಹರೀಶ್ ನಾಯ್ಕ ನಿದಿಗೆ ಕುಮಾರ್ ಹಲವಾರು ಮುಖಂಡರು ಇದ್ದರು.