ಸಂಸ್ಕಾರ ಸಂಸ್ಕøತಿ ನಿಂತಿರುವುದು ಮಹಿಳೆಯರಿಂದ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ವಿನೋಬನಗರದ ಶಿವಾಲಯದಲ್ಲಿ ಇಂದು ಶಿವಮೊಗ್ಗ ಜಿಲ್ಲಾ ಜಂಗಮ ಮಹಿಳಾ ಸಮಾಜದ 7ನೇ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಜಾತಿ-ಧರ್ಮ ಯಾವುದೇ ಇರಲಿ ಸಮಾಜಕ್ಕೆ ಶಕ್ತಿ ತುಂಬುವ ಕೆಲಸವನ್ನು ಮಾತೆಯರು ಮಾಡುತ್ತಿದ್ದಾರೆ. ನಾರಿಶಕ್ತಿ ಪ್ರಮುಖವಾಗಿದ್ದು, ಸಮಾಜ ಸರಿದಾರಿಯಲ್ಲಿ ನಡೆಯಲು ಮಾತೆಯರು ಕಾರಣ. ಈ ನಿಟ್ಟಿನಲ್ಲಿ ಜಿಲ್ಲಾ ಜಂಗಮ ಮಹಿಳಾ ಸಮಾಜ ಹಮ್ಮಿಕೊಂಡಿರುವ ಕಾರ್ಯಕ್ರಮಗಳು ಶ್ಲಾಘನೀಯ ಎಂದು ಹೇಳಿದರು.


ವಿಧಾನಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಮಾತನಾಡಿ, ಯಾವುದೇ ದೇವಾಲಯಗಳಿಗೆ ಪ್ರಭಾವಳಿಗಳು ಮುಖ್ಯ, ಅರ್ಚಕರು, ಜಂಗಮರು ಮುಖ್ಯ, ಅದೇ ರೀತಿ ನಮ್ಮ ದೇಶದ ಬಗ್ಗೆ ಪ್ರಪಂಚದಾದ್ಯಂತ ಗೌರವ ಸಿಗಲು ಭಾರತೀಯ ಸಂಸ್ಕøತಿ ಕಾರಣ. ಇದರ ಹಿಂದೆ ಮಹಿಳೆಯರ ಶ್ರಮ ಅಪಾರ ಎಂದರು.
ಪ್ರಪಂಚದ ಮೊದಲ ನಾಗರಿಕತೆ ಸಿಂಧೂ ಬಯಲಿನ ನಾಗರಿಕತೆಯಾಗಿದೆ.

ಸೊನ್ನೆಯನ್ನು ಕಂಡುಹಿಡಿದಿದ್ದು, ಭಾರತ, ನಲಂದ ತಕ್ಷಶಿಲೆಯಂತಹ ಪ್ರಾಚೀನ ವಿವಿಗಳು ಭಾರತದ ಮೆರುಗು ಹೆಚ್ಚಿಸಿವೆ. ಹತ್ತು ಸಾವಿರ ಶಿಕ್ಷಕರು, ಒಂದು ಲಕ್ಷ ವಿದ್ಯಾರ್ಥಿಗಳು ನಲಂದ ವಿವಿಯಲ್ಲಿ ಇದ್ದರು. ಅಲ್ಲಿನ ಗ್ರಂಥಾಲಯಕ್ಕೆ ಬೆಂಕಿ ಹಚ್ಚಿದಾಗ ಸಂಪೂರ್ಣವಾಗಿ ಸುಡಲು 6 ತಿಂಗಳು ಬೇಕಾಯಿತು. ದೇಶವನ್ನು ಹಾಳು ಮಾಡಲು ಈಗ ಯುದ್ಧ ಮಾಡಬೇಕಾಗಿಲ್ಲ. ಸಂಸ್ಕøತಿ, ಸಂಸ್ಕಾರ ನಾಶ ಮಾಡಿದರೆ ಸಾಕು. ಆದರೆ ಭಾರತದಲ್ಲಿ ಒಳ್ಳೆಯ ಸಂಸ್ಕøತಿ ಸಂಸ್ಕಾರ ಉಳಿದು ಬೆಳೆದುಕೊಂಡು ಬರಲು ಮಹಿಳೆಯರು ಕಾರಣ.ಜೀವನದಲ್ಲಿ ಸಂಸ್ಕಾರ ಮುಖ್ಯ ಎಂದ ಹೇಳಿದರು.


ಕಾರ್ಯಕ್ರಮದಲ್ಲಿ ಜಿಲ್ಲಾ ಜಂಗಮ ಮಹಿಳಾ ಸಮಾಜದ ಮಾಜಿ ಅಧ್ಯಕ್ಷೆ ಸುಜಯ ಪ್ರಸಾದ್, ಸಮಾಜದ ಹಿರಿಯ ದಂಪತಿಗಳಿಗೆ ಸನ್ಮಾನಿಸಲಾಯಿತು. ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.


ಕಾರ್ಯಕ್ರಮದಲ್ಲಿ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜಿ ಸಾನಿಧ್ಯ ವಹಿಸಿದ್ದರು. ಜಿಲ್ಲಾ ಜಂಗಮ ಸಮಾಜದ ಅಧ್ಯಕ್ಷೆ ಹೆಚ್.ಎಂ. ಪ್ರೇಮವೀರಪ್ಪಯ್ಯ, ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಈ.ಕಾಂತೇಶ್, ಮಹಾನಗರ ಪಾಲಿಕೆ ಮಾಜಿ ಸದಸ್ಯ ಹೆಚ್.ಸಿ.ಯೋಗೀಶ್, ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಮಹಾಲಿಂಗಯ್ಯ ಶಾಸ್ತ್ರಿ, ಪ್ರಮುಖರಾದ ಎಸ್.ಪಿ.ದಿನೇಶ್, ಬಳ್ಳಕೆರೆ ಸಂತೋಷ್,ಎ.ಎಂ.ಚಂದ್ರಯ್ಯ, ಲೋಕೇಶ್ ಹೆಚ್.ಎಂ.ದೊಡ್ಡಮಠ, ಹಾಗೂ ಸಂಘದ ಗೌರವಾಧ್ಯಕ್ಷೆ ಪಾರ್ವತಮ್ಮ ಪಂಚಾಕ್ಷರಯ್ಯ, ಉಪಾಧ್ಯಕ್ಷರಾದ ಗಿರಿಜಮ್ಮ ಪ್ರಭುಕುಮಾರ್, ಗೌರವ ಕಾರ್ಯದರ್ಶಿ ಶೈಲಜಾ ಜಯದೇವಯ್ಯ, ಸಹಕಾರ್ಯದರ್ಶಿ ರೇಖಾ ವಾಗೀಶ್, ಖಜಾಂಚಿ ಸುಲೋಚನ ಪರಮೇಶ್ವರಯ್ಯ ಇದ್ದರು.