ಮಂಜುನಾಥ್ ಶೆಟ್ಟಿ…

ಬಂಟರ ಸಂಘ ಬೆಂಗಳೂರು ವತಿಯಿಂದ ನೂತನ ವಿದ್ಯಾರ್ಥಿನಿ ನಿಲಯ ಮತ್ತು ಭೋಜನ ಶಾಲೆ ಉದ್ಘಾಟನಾ ಸಮಾರಂಭ ನಡೆಯಿತು.
ಬೆಂಗಳೂರು ದಕ್ಷಿಣ ತಾಲೂಕಿನ ಯಲಚೆಗುಪ್ಪೆ ಗ್ರಾಮ ತಾವರೆಕೆರೆ ಹೋಬಳಿಯಲ್ಲಿ ನೂತನ ಕಟ್ಟಡವನ್ನು ಶಶಿಕಿರಣ್ ಶೆಟ್ಟಿ ಅಡ್ವಕೇಟ್ ಜನರಲ್ ಆಫ್ ಕರ್ನಾಟಕ ರವರು ಉದ್ಘಾಟಿಸಿದರು.

ಅತಿಥಿಗಳಾಗಿ ಬೆಂಗಳೂರು ಬಂಟರ ಸಂಘದ ಅಧ್ಯಕ್ಷರಾದ ಅಶೋಕ ಶೆಟ್ಟಿ ಮತ್ತು ಹಿಂದಿನ ಅಧ್ಯಕ್ಷರಾದ ಮುರಳಿಧರ್ ಹೆಗ್ಡೆ ಭಾಗವಹಿಸಿದ್ದರು.
ಇದೇ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲಕ್ಕೋಸ್ಕರ ನೂತನ ಮೊಬೈಲ್ ಆಪ್ ಅನಾವರಣಗೊಳಿಸಿದರು.
ನೂತನ ಕಟ್ಟಡದಲ್ಲಿ ವಾಸ್ತು ಹೋಮ ಸುದರ್ಶನ ಹೋಮ ಮತ್ತು ಸತ್ಯನಾರಾಯಣ ಪೂಜೆ ವಿಶೇಷವಾಗಿ ನಡೆಯಿತು.


ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರು ಕಾರ್ಯದರ್ಶಿ ಮತ್ತು ಸಮಸ್ತ ಪದಾಧಿಕಾರಿಗಳು ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿರಿದರು.

Leave a Reply

Your email address will not be published. Required fields are marked *