ಮಂಜುನಾಥ ಶೆಟ್ಟಿ…
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿ ಇಂದು ಶಿವಮೊಗ್ಗ ಸಿಟಿ ಕೋ ಆಪರೇಟಿವ್ ಬ್ಯಾಂಕಿನ ಅಧ್ಯಕ್ಷರು, ಮಾಜಿ ಯುವ ಕಾಂಗ್ರೆಸ್ ಅಧ್ಯಕ್ಷರು, ಜಿಲ್ಲೆಯ ಮುಂಚೂಣಿ ಯುವ ಹೋರಾಟಗಾರ, ಪಕ್ಷ ನಿಷ್ಠೆಯ ಸಂಘಟಕ ಕೆ ರಂಗನಾಥ್ ರವರು ಪಕ್ಷದ ಕಚೇರಿಯಲ್ಲಿ ಆಡಳಿತ ಕಾರ್ಯದರ್ಶಿ ಎಸ್ ಟಿ ಹಾಲಪ್ಪನವರಿಗೆ ತಮ್ಮ ಅರ್ಜಿಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ನ ಹೆಚ್ಪಿ ಗಿರೀಶ್, ಟಿವಿ ರಂಜಿತ್ ,ಬಿ ಲೋಕೇಶ್, ಎಸ್ ಕುಮಾರೇಶ್, ಪುಷ್ಪಕ್ ಕುಮಾರ್, ಇಂಟೆಕ್ ಮಹಿಳಾ ಅಧ್ಯಕ್ಷರಾದ ಕವಿತಾ ರಾಘವೇಂದ್ರ, ಕೆ ಎಲ್ ಪವನ್, ಎಂ ರಾಕೇಶ್,ಎಮ್ ರಾಹುಲ್, ಮನ್ವಿಕ್ ಜೈನ್, ಅದ್ನಾನ್, ಮಿಥುನ್, ಸೈಯದ್, ಶಮ್ಮು, ಹಾಗೂ ಪಕ್ಷದ ಉಪಸ್ಥಿತರಿದ್ದರು.