ಶಿವಮೊಗ್ಗ ನ್ಯೂಸ್

ಬೆಲೆ ಏರಿಕೆ ಇಳಿಸಲು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿಯ ಎದುರು
ಸಂಯುಕ್ತ ಜನತಾದಳದ ರಾಜ್ಯ ಕಾರ್ಯದರ್ಶಿ ಶಶಿ ಕುಮಾರ್ ಎಸ್ ಗೌಡ ಇಂದು ಏಕಾಂಗಿಯಾಗಿ
ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ
ಸಲ್ಲಿಸಿದರು.

ಬೆಲೆ ಏರಿಕೆ ಇಂದ ಜನರು ತತ್ತರಿಸಿ ಹೊಗಿದ್ದಾರೆ ಅದರಲ್ಲೂ ಪೆಟ್ರೋಲ್ ಡಿಸೇಲ್, ಅಡುಗೆ
ಅನಿಲದ ಬೆಲೆ ಗಗನಕ್ಕೆರಿವೆ ಕೊರೋನದ ಹಿನ್ನೆಲೆಯಲ್ಲಿ ಆರ್ಥಿಕವಾಗಿ ಸಂಕಷ್ಟಕ್ಕೆ
ಒಳಗಾಗಿದ್ದ ಜನರು ಈಗ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರ ಸರ್ಕಾರ
ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಸೌರ ಶಕ್ತಿಗರ ಆದ್ಯತೆ ನೀಡಬೇಕು ಎಲೆಕ್ಟ್ರಿಕ್ ವಾಹನಗಳಿಗೆ ಪ್ರೋತ್ಸಾಹ ನೀಡಬೇಕು.
ಬಿಪಿಎಲ್ ಕುಟುಂಬಗಳಿಗೆ ಉಚಿತವಾಗಿ ಎಲೆಕ್ಟ್ರಿಕ್ ಸ್ಟವ್, ಸೋಲಾರ್ ಸ್ಟವ್ ನೀಡಬೇಕು
ನ್ಯಾಯಬೆಲೆ ಅಂಗಡಿಗಳ ಮೂಲಕ ರೀಯಾಯಿತಿ ದರದಲ್ಲಿ ದಿನಸಿ ಪದಾರ್ಥಗಳ ನೀಡಬೇಕು ಎಂದು
ಮನವಿ ಮಾಡಿದ್ದಾರೆ.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…