ಶ್ರೀಯುತ ಭಾನು ಪ್ರಕಾಶ್ ರವರ ತಾಯಿ ಶ್ರೀಮತಿ “ಪ್ರಸನ್ನ ಲಕ್ಷ್ಮಿ” ಯವರು ನಿಧನಕ್ಕೆ Kssidc ಉಪಾಧ್ಯಕ್ಷರಾದ ಎಸ್ ದತ್ತಾತ್ರಿ ಸಂತಾಪ ಸೂಚಿಸಿದ್ದಾರೆ.

ಬಿಜೆಪಿ ರಾಜ್ಯ ಪ್ರಕೋಷ್ಠ ಸಂಚಾಲಕರು ಶ್ರೀಯುತ ಭಾನು ಪ್ರಕಾಶ್ ಜೀ ಯವರ ತಾಯಿ ಶ್ರೀಮತಿ “ಪ್ರಸನ್ನ ಲಕ್ಷ್ಮಿ” ಯವರು ಇಂದು ಬೆಳಗ್ಗೆ ನಿಧನರಾದರೆಂಬ ವಿಷಯ ತಿಳಿದು ದುಃಖವಾಯಿತು…

ಭಾನುಪ್ರಕಾಶ್ ಹಾಗೂ ಅವರ ಪುತ್ರರಾದ ಶ್ರೀ ಯಾಧವಾ ಕೃಷ್ಣ, ಶ್ರೀ ಹರಿಕೃಷ್ಣ, ಶ್ರೀ ಚಿನ್ಮಯ ಕೃಷ್ಣ ಹೀಗೆ ಇಡೀ ಕುಟುಂಬವೆ ರಾಷ್ಟ್ರ ಸೇವೆಗೆ ಸೀಮಿತರಾಗಿದ್ದಾರೆ… ಇಂತ ರಾಷ್ಟ್ರ ಭಕ್ತ, ಸಂಸ್ಕಾರ ಭರಿತ ಕುಟುಂಬವನ್ನು ಹೆತ್ತು ಹೊತ್ತ ಆ ಮಹಾತಾಯಿ ನಿಜಕ್ಕೂ ಸಾರ್ಥಕ ಜೀವನ ನಡೆಸಿದ್ದಾರೆ….

ಅವರ ದಿವ್ಯಾತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ….