ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಭವನ ಕಚೇರಿಯಲ್ಲಿ ಕೆಲಸ ಸೇವೆಯಲ್ಲಿದ್ದ ಅಬ್ದುಲ್ ವಾಜಿದ್ ಎಸ್.ಕೆ ರವರು ಇಂದು ದಿನಾಂಕ 12 – 06 – 2021 ಶನಿವಾರ ಬೆಳಗ್ಗಿನ ಜಾವ 5ಗಂಟೆಗೆ ನಿಧನ ರಾದರು ಎಂಬ ಸುದ್ದಿಯೂ ದಿಗ್ಭ್ರಮೇ ದುಃಖವು ಉಂಟಾಗಿದೆ ಇವರ ನಿಧನವು ಕಾಂಗ್ರೆಸ್ ಪಕ್ಷಕ್ಕೆ ಆಘಾತವನ್ನುಂಟು ಮಾಡಿದ್ದಾಗಿದೆ ಕಾಂಗ್ರೆಸ್ ಅಪಾರ ನಷ್ಟವಾಗಿದೆ. ಅಬ್ದುಲ್ ವಾಜಿದ್ ರವರಿಗೆ ಕಳೆದ ಒಂದು ವಾರದಿಂದ ಆರೋಗ್ಯದಲ್ಲಿ ಏರುಪೇರಾಗಿ ಲೋ ಬಿ.ಪಿ ಯಿಂದ ನಿಧನ ಹೊಂದಿದ್ದಾರೆ.
ಶಿವಮೊಗ್ಗದ ಬೊಮ್ಮನಕಟ್ಟೆಯಲ್ಲಿ ಸಿ ಬ್ಲಾಕ್ ಮನೆ ನಂಬರ್ 188 ರಲ್ಲಿ ವಾಸವಾಗಿದ್ದ ಅಬ್ದುಲ್ ವಾಜಿದ್ರವರಿಗೆ 70 ವರ್ಷ ದೀರ್ಘಕಾಲದ ತುಂಬು ಜೀವನ ನಡೆಸಿದ ಇವರು ಪತ್ನಿ , ಪುತ್ರಿ , ಅಳಿಯ , ಸೇರಿದಂತೆ ಅಪಾರ ಬಂಧು-ಮಿತ್ರರನ್ನು ಬಿಟ್ಟು ಅಗಲಿದ್ದಾರೆ.ಇವರನಿಧನಕ್ಕೆ ನಾವು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ಸಂತಾಪ ವ್ಯಕ್ತಪಡಿಸುತ್ತಾ ಮೃತರ ಆತ್ಮಕ್ಕೆ ಚಿರಶಾಂತಿಗೆ ಪ್ರಾರ್ಥನೆ. ಪಾರ್ಥಿವ ಶರೀರದ ಅಂತ್ಯಕ್ರಿಯೇ ಇಂದು ಬೆಳಿಗ್ಗೆ11ಗಂಟೆಸುಮಾರಿಗೆ ಶಿವಮೊಗ್ಗದ ಅಶೋಕ ಸರ್ಕಲ್ನ ಬಸ್ ನಿಲ್ದಾಣ ಹತ್ತಿರ ಇರುವ ಸನ್ನಿ ಖಬರಸ್ಥಾನ ಸ್ಮಶಾನದಲ್ಲಿ ನಡೆಯಲಿದೆ ಎಂದು ಅವರು ಕುಟುಂಬದ ಮೂಲಗಳು ತಿಳಿಸಿವೆ

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ