ಶಿವಮೊಗ್ಗ; ಶಿವಮೊಗ್ಗದಲ್ಲಿ ನಡೆದ ಹಷ್ರ ಕೊಲೆಗಡುಕರಿಗೆ ಗಲ್ಲು ಶಿಕ್ಷೆಯಾಗಬೇಕು. ಇಲ್ಲವೇ ಅವರೆಲ್ಲರನ್ನು ಎನ್ಕೌಟರ್ ಮಾಡಿ ಸಾಯಿಸಬೇಕು ಮತ್ತು ಹಿಂದು ಯುವಕರ ಹತ್ಯೆಗಳು ಇಂದಿಗೆ ಕೊನೆಯಾಗಬೇಕು ಎಂದು ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.

ಅವರು ಇಂದು ಹತ್ಯೆಯಾದ ಹಿಂದು ಯುವಕ ಹರ್ಷನ ಮನೆಗೆ ಭೇಟಿನೀಡಿ ಕುಟುಂಬ ದವರಿಗೆ ಸಾಂತ್ವಾನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾಡನಾಡಿದರು.ಶಿವಮೊಗ್ಗ ನಗರದಲ್ಲಿ ನಡೆದ ಹರ್ಷ ಹತ್ಯೆ ಅತ್ಯಂತ ನೋವಿನ ಮತ್ತು ರೋಷದ ಘಟನೆಯಾಗಿದೆ. ಶಿವಮೊಗ್ಗದಲ್ಲಿ ಮಾತ್ರವಲ್ಲದೆ ಇಡೀ ರಾಜ್ಯದಲ್ಲಿ ಹಿಂದುಗಳ ರಕ್ತ ಕುದಿಯುತ್ತಿದೆ. ಇಂತಹ ದುರ್ಘಟನೆ ನಡೆಯಬಾರದಿತ್ತು. ಮತ್ತು ಇಲ್ಲಿಗೆ ಇಂತಹ ಘಟನೆಗಳ ಅಂತ್ಯವಾಗಬೇಕು ಎಂದು ಒತ್ತಾಯಿಸಿದರು.

ಈ ಹಿಂದೆ ರಾಜ್ಯದಲ್ಲಿ ನಡೆದ ಹಿಂದೂ ಯುವಕರ ಹತ್ಯೆಗೆ ಸಂಬಂಧಿಸಿದಂತೆ ಅರೋಪಿಗಳಿಗೆ ಜಾಮೀನು ಸಿಕ್ಕು ಹೊರಗೆ ಬರುತ್ತಿದ್ದಾರೆ. ಆದರೆ ಶಿವಮೊಗ್ಗದಲ್ಲಿ ಹೀಗಾಗಬಾರದು. ಹರಷ ಹತ್ಯೆ ಆರೋಪಿಗಳು ಯಾವುದೇ ಕಾರಣಕ್ಕೂ ಜಾಮೀನು ಪಡೆದುಕೊಂಡು ಹೊರಬರಬಾರದು. ಅವರ ವಿರುದ್ದ ಪೊಲೀಸರು ಕಠಿಣ ಕಾಯ್ದೆಗಳನ್ನು ಹಾಕಬೇಕು. ಕೋಕಾ ಕಾಯ್ದೆಯಡಿಯಲ್ಲಿ ಕೇಸ್ ದಾಖಲಿಸಿಕೊಳ್ಳಬೇಕು. ಇದಕ್ಕಾಗಿ ವಿಶೇಷ ನ್ಯಾಯಾಲಯ ಸ್ಥಾಪಿಸಬೇಕು. ಒಂದು ವರ್ಷದೊಳಗೆ ತೀರ್ಪು ಬಂದು ಅವರಿಗೆ ಗಲ್ಲು ಶಿಕ್ಷಯಾಗಬೇಕು. ಹೀಗಾಗದಿದ್ದರೆ ಹಿಂದೂ ಸಮಾಜ ಸುಮ್ಮನಿರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾನು ಈಗಾಗಲೇ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಮುಖ್ಯಮಂತ್ರಿ ಹಾಗೂ ಗೃಹ ಸಚಿವರನ್ನು ಭೇಟಿಯಾಗಿ ಮಾತನಾಡಿದ್ದೇನೆ. ಹರ್ಷ ಒಬ್ಬ ದೇಶ ಭಕ್ತ. ಆತನ ಸಾವು ವ್ಯರ್ಥವಾಗಬಾರದು. ಅವನ ಕೊಲೆ ಯಾವುದೇ ಸ್ವಾರ್ಥಕ್ಕೆ ನಡೆದಿಲ್ಲ. ಹಿಂದುತ್ವದ ಹಿನ್ನಲೆಯಲ್ಲಿ ಅವನ ಕೊಲೆಯಾಗಿದೆ. ಈ ರೀತಿಯ ಕೊಲೆಗಳಾದಾಗ ಹಿಂದೆ ಕೇವಲ ರಾಜಕಾರಣಿಗಳು ಮಾತ್ರ ಸಾಂತ್ವನ ಹೇಳುತ್ತಿದ್ದರು. ಇಡೀ ಹಿಂದೂ ಸಮಾಜವೇ ಹರ್ಷನ ಪರವಾಗಿ ನಿಂತಿದೆ ಎಂದರು.ಹಳೆದ್ವೇಷ ಎಂಬ ಆಧಾರದಲ್ಲಿ ಇದನ್ನು ಮುಚ್ಚಿ ಹಾಕುವ ಪ್ರಯತ್ನವನ್ನು ಪೊಲೀಸರು ಮಾಡಬಾರದು. ಕೇವಲ 302 ಕೇಸ್ ಹಾಕಿ ಕೈ ತೊಳೆದುಕೊಳ್ಳಬಾರದು. ಆರೋಪಿಗಳು ತಪ್ಪಿಸಿಕೊಳ್ಳುವಂತಹ ಕಾಯ್ದೆಗಳನ್ನು ನಮೂದಿಸಬಾರದು.

ಹಿಂದೂ ಯುವಕರ ಹತ್ಯೆಗಳು ಇದೇ ಕೊನೆಯಾಗಬೇಕು. ಈ ಹತ್ಯೆ ಸಾಮಾನ್ಯದವರು ಮಾಡಿಲ್ಲ. ಇದರ ಹಿಂದೆ ಹಲವು ಶಕ್ತಿಗಳಿವೆ. ತರಬೇತಿ ಪಡೆದವರು ಮಾತ್ರ ಇಂತಹ ಕೊಲೆಗಳನ್ನು ಮಾಡಲು ಸಾಧ್ಯ ಎಂದರು. ಷರಿಯಾ ಮತ್ತು ಕುರಾನ್ ಆಧಾರದ ಮೇಲೆ ನೀವು ಈ ದೇಶದಲ್ಲಿ ನಡೆಯುವುದಾದರೆ ಸಂವಿಧಾನಕ್ಕೆ ಬೆಲೆ ಇಲ್ಲದಮತಾಗುತ್ತದೆ. ನಿಮಗೆ ಇಷ್ಟ ಬಂದ ದೇಶಕ್ಕೆ ನೀವು ಹೋಗಬಹುದು. ಹಿಂದೂ ಕಾರ್ಯಕರ್ತನ ಶವದ ಮೆರವಣಿಗೆಗೆ ಅವಕಾಶ ಇಲ್ಲ ಎಂದರೆ ಏನರ್ಥ. ಹಸಿರು ಬಾವುಟ ತೋರಿಸಿ, ಕೈಯಲ್ಲಿ ಲಾಂಗ್ ಝಳಪಿಸಿ ಪ್ರಚೋದನೆ ಮಾಡಿದವರನ್ನು ಮೊದಲು ಬಂಧಿಸಿ. ಪ್ರಚೋದನೆಯಿಂದಾಗಿಯೇ ಹಿಂದೂ ಕಾರ್ಯಕರ್ತರು ಕಲ್ಲು ಹೊಡೆದಿರಬಹುದು. ವಿನಾಕಾರಣ ಹಿಂದೂ ಕಾರ್ಯಕರ್ತರನ್ನು ಬಂಧಿಸಿದರೆ ಸುಮ್ಮನಿರಲು ಆಗುವುದಿಲ್ಲ ಎಂದರು.

ರಾಜು ಕೊಲೆ ಕೇಸಿನಲ್ಲಿ ಕೂಡ ಇವತ್ತಿಗೂ ಕಾರ್ಯಕರ್ತರು ಓಡಾಡುತ್ತಿದ್ದಾರೆ. ಲಾಂಗ್ ಮಚ್ಚು ತೋರಿಸಿದವರ ಮೇಲೆ ಮೊದಲು ಕೇಸ್ ಹಾಕಿ. ಇನ್ನುಮುಂದೆ ಈ ರೀತಿ ಘಟನೆಗೆ ಹಿಂದೂ ಸಮಾಜ ಖಂಡಿತ ಅವಕಾಶ ನೀಡುವುದಿಲ್ಲ. ಈ ಬಾರಿ ಇಡೀ ಸಮಾಜ ಎದ್ದು ಕೂತಿದೆ. ಎಚ್ಚರವಿರಲಿ ಎಂದರು.ಈ ಸಂದರ್ಭದಲ್ಲಿ ದೊಡ್ಡಬಳ್ಳಾಪುರದ ಬಸವದೇವರ ಮಠದ ನಿಶ್ಚಲ ದೇಶೀಕೇಂದ್ರ ಶ್ರೀಗಳು ಕೂಡ ಉಪಸ್ಥಿರಿದ್ದು, ಹರ್ಷ ಕುಟುಂಬದವರಿಗೆ ಸಾಂತ್ವನ ಹೇಳಿ ಆರ್ಥಿಕ ನೆರವು ನೀಡಿದರು.

ವರದಿ ಮಂಜುನಾಥ್ ಶೆಟ್ಟಿ…