ಬಜರಂಗದಳ ಕಾರ್ಯಕರ್ತ ಹರ್ಷನ ಮನೆಗೆ ಇಂದು ಶಿವಮೊಗ್ಗ ವೈದ್ಯರ ಸಂಘ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಜೊತೆಗೆ ವೈದ್ಯರ ಸಂಘದ ವತಿಯಿಂದ ಹರ್ಷನ ಕುಟುಂಬಸ್ಥರಿಗೆ ರೂ 2,27,000 ಚೆಕ್ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಮೆಟ್ರೋ ಆಸ್ಪತ್ರೆ ಮುಖ್ಯಸ್ಥರಾದ ಡಾ. ತೇಜಸ್ವಿ , ಶ್ರೀಧರ್ , ಡಾ. ರವಿಕಿರಣ್, ಡಾ.ಗೌತಮ್, ಡಾ. ತಾನಾಜಿ, ಡಾ. ಶ್ರೀನಿವಾಸ್ ರೆಡ್ಡಿ, ಡಾ. ಸುರೇಶ್, ಡಾ. ಮರುಳಾರಾಧ್ಯ, ಡಾ. ಶಶಿಕಾಂತ್ ಉಪಸ್ಥರಿದ್ದರು.

ವರದಿ ಮಂಜುನಾಥ್ ಶೆಟ್ಟಿ…