ಶಿವಮೊಗ್ಗ ತಾಲೂಕು ಹೊಳಲೂರು ಹೋಬಳಿ ಸೋಮಿನಕೊಪ್ಪ ಗ್ರಾಮದಲ್ಲಿ ಅಗ್ನಿ ಅನಾಹುತಕ್ಕೆ ಬಡ ರೈತರಾದ ಕುಮಾರಪ್ಪ, ನರಸಿಂಹಪ್ಪ ಹಾಗು ಸರಸ್ವತಮ್ಮ ನವರ ಮೆಕ್ಕೆಜೋಳದ ತೆನೆಯ ರಾಶಿ ಸಂಪೂರ್ಣ ಸುಟ್ಟು ಕರಕಲಾಗಿತ್ತು.

ವಿಷಯ ತಿಳಿದ ಕೂಡಲೆ ತಕ್ಷಣ ಸೋಮಿನಕೊಪ್ಪ ಗ್ರಾಮಕ್ಕೆ ಬೇಟಿ ನೀಡಿದ ಮಾಜಿ ಶಾಸಕಿ ಶ್ರೀಮತಿ ಶಾರದಾ ಪೂರ್ಯನಾಯ್ಕ್ ರವರು ನೊಂದ ಕುಟುಂಬಗಳಿಗೆ ಸಾಂತ್ವನ ಹೇಳಿ ವೈಯಕ್ತಿಕವಾಗಿ ಧನ ಸಹಾಯ ಮಾಡಿದರು. ಸಂದರ್ಭದಲ್ಲಿ ಜೆಡಿಎಸ್ ಕಾರ್ಯಾಧ್ಯಕ್ಷರಾದ ಕಾಂತರಾಜ್ ಸೋಮಿನಕೊಪ್ಪ ಗ್ರಾಮದ ಹಿರಿಯರು ಹಾಗು ಯುವಕರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…