05/03/2022 ಶನಿವಾರ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಪುರಸಭೆಯ ವ್ಯಾಪ್ತಿಯಲ್ಲಿ ರೈತಾಭಿಮಾನ ಕಾರ್ಯಕ್ರಮಕ್ಕೆ ಮುಖ್ಯ ಮಂತ್ರಿಗಳಾದ ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ ರವರು, ಶಿಕಾರಿಪುರಕ್ಕೆ 5ನೇ ತಾರೀಖು ಆಗಮನದಿಂದ ನಗರದಲ್ಲಿ ಶ್ರೀ ಮಾರಿಕಾಂಬಾ ಬಯಲು ರಂಗಮಂದಿರ ಕಾಂಪೌಂಡ್ ಮತ್ತು ಬಿ.ಎಸ್.ಎನ್.ಎಲ್ ಕಾಂಪೌಂಡ್ ಬಳಿ ಹದಿನೈದು ವರ್ಷಗಳಿಂದ ವ್ಯಾಪಾರ ಮಾಡುತ್ತಾ ಬಂದಿಂದ ಬೀದಿ ಬದಿ ವ್ಯಾಪಾರಿಗಳಿಗೆ ದಿನಾಂಕ: 03/03/2022 ರಿಂದ 05/03/2022ರ ಮೂರು ದಿನಗಳ ವರೆಗೆ ವ್ಯಾಪಾರ ಬಂದು ಮಾಡಲು ಅಧಿಕಾರಿಗಳು ತಿಳಿಸಿದ್ದು ಅದರಂತೆ ಬೀದಿ ಬದಿ ವ್ಯಾಪಾರಿಗಳು ತಮ್ಮ ವ್ಯಾಪಾರ ಬಂದು ಮಾಡಿರುತ್ತಾರೆ.

5ನೇ ತಾರೀಖಿನ ಸಂಜೆ ವೇಳೆ ಜೆಸಿಪಿಯಿಂದ ಬೀದಿ ಬದಿ ವ್ಯಾಪಾರ ಮಾಡುವ ವ್ಯಾಪಾರಿಗಳ ಸ್ಥಳವನ್ನು ಯಾವುದೇ ಮಾಹಿತಿ ನೀಡದೆ ದೊಂಸ ಗೊಳಸಿರುತ್ತಾರೆ, ಮುಖ್ಯ ಮಂತ್ರಿಗಳು ನಗರಕ್ಕೆ ಆಗಮನದಿಂದ ಬೀದಿ ಬದಿ ವ್ಯಾಪಾರಿಗಳಿಗೆ ವರದಾನವಾಗದೆ, ಶಾಪವಾಗಿದೆ ಎಂದು ವ್ಯಾಪಾರದ ಸ್ಥಳವನ್ನು ದೊಂಸಗೊಳಿದ ಆಧಿಕಾರಿಗಳ ವಿರುದ್ಧ ಬೀದಿ ಬದಿ ವ್ಯಾಪಾರಿಗಳು ಧಿಕ್ಕಾರ ಕೂಗಿದರು.

ಈ ಸಂದರ್ಭದಲ್ಲಿ ಸ್ಥಳೀಯ ಬೀದಿ ಬದಿ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…