ಶಿವಮೊಗ್ಗದ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ಆಲೇಮಾನ್ ಕೇರಿ 1ನೇ ತಿರುವಿನಲ್ಲಿ ರಫೀಕ್ ಅಹಮ್ಮದ್ ಖಾನ್ ಮತ್ತು ವಸೀಂ ಖಾನ್ ರವರು ಮಾಂಸ ಮಾರಾಟ ಮಾಡುವ ಉದ್ದೇಶದಿಂದ ಜಾನುವಾರುಗಳನ್ನು ತಂದು ಇಟ್ಟುಕೊಂಡಿರುವ ಬಗ್ಗೆ ಬಂದ ಮಾಹಿತಿಯ ಮೇರೆಗೆ ಪಿಐ ಕೋಟೆ ಪೊಲೀಸ್ ಠಾಣೆ ಹಾಗೂ ಸಿಬ್ಬಂಧಿಗಳ ತಂಡವು ಸ್ಥಳಕ್ಕೆ ಹೋದಾಗ ಆರೋಪಿತರಾದ ಹಾಜಿ ರಫೀಕ್ ಅಹಮ್ಮದ್, 71 ವರ್ಷ, ಆಲೇಮಾನ್ ಕೇರಿ, ಲಕ್ಷರ್ ಮೊಹಲ್ಲಾ, ಶಿವಮೊಗ್ಗ ಟೌನ್ ಮತ್ತು ವಸೀಂ ಖಾನ್, 29 ವರ್ಷ, ಅಣ್ಣಾ ನಗರ ಶಿವಮೊಗ್ಗ ರವರನ್ನು ದಸ್ತಗಿರಿ ಮಾಡಿ ಆರೋಪಿತರಿಂದ ಒಟ್ಟ 39 ಜಾನುವಾರುಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿತರ ವಿರುದ್ಧ ಗುನ್ನೆ ನಂ.43/2022 ಕಲಂ 04, 05, 07, 12 THE KARNATAKA PREVENTION OF SLAUGHTER AND PRESERVATION OF CATTLE ACT-2020 ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

ವರದಿ ಮಂಜುನಾಥ್ ಶೆಟ್ಟಿ…