ಶ್ರೀ ಸಿದ್ಧಾರೂಢ ಆಶ್ರಮ ಮತ್ತು ಆರೂಢ ಬಳಗದ ಯುವಕರ ಬಳಗದಿಂದ ಪ್ರತಿನಿತ್ಯ ಅನ್ನದಾಸೋಹ ನಡೆಯುತ್ತಿದ್ದು. ಪೋಲಿಸ್ ನವರಿಗೆ ಆಹಾರ ವಿತರಣೆ ಮಾಡಿದ ನಂತರ ನಿರಾಶ್ರಿತರಿಗೆ,ನಿರ್ಗತಿಕರಿಗೆ, ಅಂಗವಿಕಲರಿಗೆ,ವಿಕಲಚೇತನರಿಗೆ ಅವರ ಮನೆ ಬಾಗಿಲಿಗೆ ಹೋಗಿ ಶ್ರೀ ಗುರುಗಳು ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ. ನಿತ್ಯ 300-400 ಜನಗಳಿಗೆ ಅನ್ನ ದಾಸೋಹ ನಡೆಸುತ್ತಿರುವ ಗುರುಗಳು, ಶಿವಮೊಗ್ಗದ ಊರುಗಡೂರಿನಲ್ಲಿ ಪುಟ್ಟ ಆಶ್ರಮ ನಡೆಸುತ್ತಿದ್ದಾರೆ. ನಿತ್ಯ ನೂರಾರು ಭಕ್ತಾದಿಗಳು ಗುರುಗಳ ಆಶೀರ್ವಾದ ಪಡೆಯುತ್ತಿದ್ದಾರೆ. ಯಾವುದೇ ಪ್ರಚಾರ ಬಯಸದ ಗುರುಗಳು ಕೆಲವು ನವಯುವಕರನ್ನು ಒಂದುಗೂಡಿಸಿ “ಆರೂಢ ಬಳಗ” ಎಂಬ ಸಂಘವನ್ನು ಮಾಡಿ ಜನಗಳಿಗೆ ಸೇವೆ ಸಲ್ಲಿಸುತ್ತಿದ್ದಾರೆ.

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153