ಶಿವಮೊಗ್ಗ ರೋಟರಿ ಉತ್ತರದಿಂದ ಶಿವಮೊಗ್ಗದ ಗುಡ್ ಲಕ್ ಆರೈಕೆ ಕೇಂದ್ರದಲ್ಲಿ ಒಂದು ವಿನೂತನ ಕಾರ್ಯಕ್ರಮ ಹಮ್ಮಿಕೊಂಡು ನಿರ್ಗತಿಕರಿಗೆ ಮತ್ತು ಮಾನಸಿಕ ಅಸ್ವಸ್ಥರಿಗೆ ಧೈರ್ಯವನ್ನು ಹಾಗೂ ನಾವು ಸಮರ್ಥರು ಅನಾಥರಲ್ಲ ನಮ್ಮನ್ನ ಗಮನಿಸುವವರು ಸಮಾಜದಲ್ಲಿ ಇದ್ದಾರೆ ಎನ್ನುವ ನಂಬಿಕೆಯನ್ನು ಹುಟ್ಟಸುವುದೇ ಈ ಕಾರ್ಯಕ್ರಮದ ಉದ್ದೇಶ ಎಂದರು.

ಈ ಸಂದರ್ಭದಲ್ಲಿ ಗುಡ್ ಲಕ್ ಆರೈಕೆ ಕೇಂದ್ರದ ಫಲಾನುಭವಿಗಳಿಗೆ ಒಂದು ದಿನದ ಆಹಾರವನ್ನು ರೋಟರಿ ಉತ್ತರದ ವತಿಯಿಂದ ಒದಗಿಸಲಾಯಿತು.ಈ ಸಂದರ್ಭದಲ್ಲಿ ಗುಡ್ ಲಕ್ ಆರೈಕೆ ಕೇಂದ್ರದ ಕಾರ್ಯದರ್ಶಿ ಪಂಚಾಕ್ಷರಿ ಹಿರೇಮಠ ಸಂಸ್ಥೆಯ ಬಗ್ಗೆ ಮಾತನಾಡಿದರು ಅದಲ್ಲದೆ ವಿಜಯಕುಮಾರ್ ಅವರು ಮಾಹಿತಿ ನೀಡಿದರು ಆರೈಕೆ ಕೇಂದ್ರ ಅಧ್ಯಕ್ಷರಾದ ಯು. ರವೀಂದ್ರನಾಥ್ ಐತಾಳ್ ಮಾತನಾಡುತ್ತಾ ಹಿರಿಯರ, ಮಾತಾಪಿತ್ರಗಳ ಆಶೀರ್ವಾದ ಮತ್ತು ಅವರ ಬಗ್ಗೆ ಗೌರವ ಹೊಂದಿದವನು ಮಾತ್ರ ಸಮಾಜ ಸೇವಕ ರೋಟರಿ ಕ್ಲಬ್ ಹಾಗೂ ಸದಸ್ಯರು ಇಂತಹ ಕಾರ್ಯ ಮಾಡುತ್ತಿರುವುದು ಅನುಕರಣೀಯ ಅಂತ ತಿಳಿಸಿದರು.

ಈ ಸಂದರ್ಭದಲ್ಲಿ ರೋಟರಿ ಉತ್ತರದ ಅಧ್ಯಕ್ಷರಾದ ಪ್ರೊಫೆಸರ್ ಸತ್ಯನಾರಾಯಣ ರವರು ಅರೈಕೆ ಕೇಂದ್ರದ ಕಾರ್ಯಗಳನ್ನು ಕೊಂಡಾಡಿದರು. ಈ ಸಂದರ್ಭದಲ್ಲಿ ಅನೇಕ ದಾನಿಗಳು ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಸಹಾಯ ಮಾಡಿದರು.ರೋಟರಿ ಉತ್ತರದ ಕಾರ್ಯದರ್ಶಿ ಮಂಜುನಾಥ ವಂದಿಸಿದರು. ಹೆಚ್ಚಿನ ಸದಸ್ಯರು ಈ ವಿಶೇಷವಾದ ಸಭೆಯಲ್ಲಿ ಭಾಗವಹಿಸಿದ್ದರು.

ವರದಿ ಮಂಜುನಾಥ್ ಶೆಟ್ಟಿ…