ಭಾಜಪ ಸಂಸ್ಥಾಪನಾ‌ ದಿನದ ಕಾರ್ಯಕ್ರಮಗಳಲ್ಲಿ ಪೋಷಣ ಅಭಿಯಾನದಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವ ಸಮರ್ಪಣೆ ಹಾಗೂ ಅಂಗನವಾಡಿ ಮಕ್ಕಳಿಗೆ ಆಟಿಕೆಗಳನ್ನು ಹಂಚುವ ಕಾರ್ಯಕ್ರಮವನ್ನು ರವೀಂದ್ರ ನಗರ ಗಣಪತಿ ದೇವಸ್ಥಾನದ ಹಿಂಭಾಗದಲ್ಲಿರುವ ಸರ್ಕಾರೀ ಶಾಲೆಯ ಆವರಣದಲ್ಲಿರುವ ಸರಸ್ವತಿ ಮಂದಿರದಲ್ಲಿ ಏರ್ಪಡಿಸಲಾಗಿತ್ತು.

ಅಂಗನವಾಡಿ ಕಾರ್ಯಕರ್ತೆಯರಾದ
ಶ್ರೀಮತಿ ಸುಮಾ, ಬಸಮ್ಮ, ಸಾಧಿಕ್, ಆಶಾ ಕಾರ್ಯಕರ್ತೆಯರ ಭಾಗ್ಯ, ವೇಣಿ ದಾದಿಯಾದ ಪ್ರೇಮ , ವೈದ್ಯಾಧಿಕಾರಿ ಡಾಕ್ಟರ್ ಉಮಾ ಇವರುಗಳನ್ನು ಗೌರವಿಸಲಾಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಶ್ರೀಮತಿ ವಿದ್ಯಾ ಲಕ್ಷ್ಮೀಪತಿ ವಹಿಸಿದ್ದರು. ಶಾಸಕರುಗಳಾದ ಶ್ರೀಯುತ ರುದ್ರೇಗೌಡ್ರು , ಡಿಎಸ್ ಅರುಣ್ ಹಾಗೂ ಎಸ್. ದತ್ತಾತ್ರಿ ಸೂಡಾ ಅಧ್ಯಕ್ಷರಾದ ನಾಗರಾಜ್, ನಗರ ಅಧ್ಯಕ್ಷರಾದ ಜಗದೀಶ್, ಜಿಲ್ಲಾ ಉಪಾಧ್ಯಕ್ಷರಾದ ಶ್ರೀಮತಿ ಪದ್ಮಿನಿ, ನಗರ ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ಸುರೇಖ ಮುರಳಿಧರ್, ಪ್ರಧಾನ ಕಾರ್ಯದರ್ಶಿಗಳಾದ ಆರತಿ ಪ್ರಕಾಶ್, ರಶ್ಮಿ ಶ್ರೀನಿವಾಸ್, ಮಾಜಿ ಮಹಾಪೌರರಾದ ಸುವರ್ಣ ಶಂಕರ್, ಪಾಲಿಕೆ ಸದಸ್ಯರುಗಳಾದ ವಿಶ್ವಾಸ್, ವಿಶ್ವನಾಥ್, ಲಕ್ಷ್ಮಿ ಶಂಕರ್ ನಾಯಕ್, ಅನಿತಾ ರವಿಶಂಕರ್ ಹಾಗೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…