ಶಿವಮೊಗ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗ್ರಾಮೀಣಾಭಿವದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ ಎಸ್ ಈಶ್ವರಪ್ಪನವರು ಸಿದ್ಧರಾಮಯ್ಯನವರು ಮೊದಲು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆದ್ದು ಶಾಸಕರಾಗಲಿ ಆಮೇಲೆ ಮುಖ್ಯಮಂತ್ರಿಯ ಗದ್ದುಗೆಗೆ ಕಣ್ಣು ಹಾಕಲಿ ಎಂದು ಹೇಳಿದರು. ಪತ್ರಕರ್ತರೊಬ್ಬರು ಕಾಂಗ್ರೆಸ್ ನಲ್ಲಿ ಮುಂದಿನ ಮುಖ್ಯಮಂತ್ರಿ ಎಂಬ ವಿಚಾರದಲ್ಲಿ ಚರ್ಚೆ ನಡೆಯುತ್ತಿದೆ ಇದರ ಬಗ್ಗೆ ಅನಿಸಿಕೆ ಕೇಳಿದಾಗ ಈಶ್ವರಪ್ಪನವರು ರಾಜ್ಯದಲ್ಲಿ ಇನ್ನೂ 2ವರ್ಷ ಬಿಜೆಪಿ ಆಡಳಿತ ಸುಭದ್ರವಾಗಿರಲಿದೆ. ಯಡಿಯೂರಪ್ಪನವರ ನೇತೃತ್ವದಲ್ಲಿ 2ವರ್ಷ ನಾವೇ ಆಡಳಿತ ಮಾಡುತ್ತೇವೆ. ಅದಾದ ನಂತರ ಮುಂದಿನ ಚುನಾವಣೆಯಲ್ಲೂ ಕೂಡ ನಮ್ಮ ಭಾರತೀಯ ಜನತಾ ಪಾರ್ಟಿಯೆ ಅಧಿಕಾರಕ್ಕೆ ಬರಲಿದ್ದು. ಜನ ಕಾಂಗ್ರೆಸ್ಸನ್ನು ತಿರಸ್ಕರಿಸಿದ್ದಾರೆ. ಮುಂದಿನ ಬಾರಿ ನಮ್ಮ ಬಹುಮತದ ಸರ್ಕಾರ ಬರಲಿದೆ ಕಾಂಗ್ರೆಸ್ನವರ ಮುಖ್ಯಮಂತ್ರಿ ಕನಸು ಕನಸಾಗಿಯೇ ಉಳಿಯಲಿದೆ ಎಂದು ಹೇಳಿದರು.
ಕೇಂದ್ರದಿಂದ ಬಂದ ಅರುಣ್ ಸಿಂಗ್ ಅವರ ಭೇಟಿಯ ನಂತರ ಪಕ್ಷದಲ್ಲಿದ್ದ ಎಲ್ಲ ವೈಮನಸ್ಸು ದೂರವಾಗಿದ್ದು ಕೇಂದ್ರದ ನಿರ್ದೇಶನದಂತೆ ಉಳಿದ 2ವರ್ಷ ಬಿಜೆಪಿ ಸರ್ಕಾರವು ರಾಜ್ಯದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಹೇಳಿದರು
ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ