ಶಿವಮೊಗ್ಗ ಜಿಲ್ಲಾ ಕೇಬಲ್ ಟಿವಿ ಆಪರೇಟರ್ಸ್ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಇಂದು ಅಂಬೇಡ್ಕರ್ ಭವನದಲ್ಲಿ ಕೇಬಲ್ ಆಪರೇಟರ್ ಗಳಿಗೆ ಹಾಗೂ ಅವರ ಕಾರ್ಮಿಕರಿಗೆ ಮತ್ತು ಕುಟುಂಬದವರಿಗೆ 18ರಿಂದ 45 ವರ್ಷ ವಯಸ್ಸಿನವರಿಗೆ ನವರಿಗೆ ಆದ್ಯತಾ ವ್ಯಾಕ್ಸಿನೇಷನ್ ಅಭಿಯಾನವನ್ನು ನೀಡಿದರು.
ಈ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಆರ್ಯವೈಶ್ಯ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಡಿ.ಎಸ್.ಅರುಣ್ ರವರು ಉದ್ಘಾಟಿಸಿ ಈ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲಾ ಆರ್.ಸಿ.ಎಚ್.ಡಾಕ್ಟರ್ ನಾಗರಾಜ ನಾಯ್ಕ ಹಾಗೂ ಡಿಎಚ್ಒ ಚಂದ್ರಶೇಖರ್ ಹಾಗೂ ಡಾಕ್ಟರ್ ಸತೀಶ್ ರವರು ಉಪಸ್ಥಿತರಿದ್ದು ಅವರ ಮೇಲ್ವಿಚಾರಣೆಯಲ್ಲಿ ವ್ಯಾಕ್ಸಿನೇಷನ್ ನೀಡಲಾಯಿತು.
ಇಂದಿನ ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷರಾದ ಎನ್.ಡಿ.ಸತೀಶ್ ರವರು ಎಲ್ಲರನ್ನೂ ಸ್ವಾಗತಿಸಿ ಮಾತನಾಡಿದರು ಈ ಕಾರ್ಯಕ್ಕೆ ಸಹಕರಿಸಿದ ಎಲ್ಲರಿಗೂ ಅಭಿನಂದಿಸಿದರು.
ಸಂಘದ ಅಧ್ಯಕ್ಷರಾದ ಏಳುಮಲೈ ಬಾಬುರವರು ಉಪಾಧ್ಯಕ್ಷರಾದ ಏರ್ಟೆಲ್ ರಂಗಣ್ಣನವರು ಪ್ರಧಾನ ಕಾರ್ಯದರ್ಶಿಗಳಾದ ರಘುಪತಿ,ಕಾರ್ಯದರ್ಶಿಗಳಾದ ರಾಬರ್ಟ್ ರವರು ಹಾಗೂ ಸಂಘದ ಖಜಾಂಚಿಗಳಾದ ಎಸ್.ಎಂ.ಶಿವಾನಂದ,ಸಹ ಕಾರ್ಯದರ್ಶಿ ಶೇಖರಪ್ಪ, ಸಂಘಟನಾ ಕಾರ್ಯದರ್ಶಿ ಗುರು ಸಾಗರ ಪ್ರಮುಖರಾದ ಸಂತೋಷ್, ವಿನಯ್, ಫಾರೂಖ್, ಏಳುಮಲೈ ಹಾಗೂ ಎಲ್ಲಾ ಪ್ರಮುಖರು ಹಾಜರಿದ್ದರು.
ಕಾರ್ಯಕ್ರಮದಲ್ಲಿ ವ್ಯಾಕ್ಸಿನೇಷನ್ ಹಾಕಿಸಿಕೊಳ್ಳಲು ಬಂದಿದ್ದ ಕೇಬಲ್ ಆಪರೇಟರ್ಗಳು ಅವರ ಕಾರ್ಮಿಕರು ಹಾಗೂ ಕುಟುಂಬದವರು ಹರ್ಷ ವ್ಯಕ್ತಪಡಿಸಿದರು.

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153