ಮಂಜುನಾಥ್ ಶೆಟ್ಟಿ…

ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮ ನಿಯಮಿತದ ಅಡಿಯಲ್ಲಿ ಬರುವ ನಗರದ ನೆಹರು ರಸ್ತೆಯ ಬಸವ ಸದನದಲ್ಲಿರುವ ಲಿಡ್ಕರ್ ಮಾರಾಟ ಮಳಿಗೆಯಲ್ಲಿ ಅಪ್ಪಟ ಚರ್ಮದ ವಸ್ತುಗಳ ಮೇಲೆ ಯುಗಾದಿ ಹಬ್ಬ ಮತ್ತು ವರ್ಷಾಂತ್ಯದ ತೀರುವಳಿ ಮಾರಾಟದ ಪ್ರಯುಕ್ತ ಎಲ್ಲಾ ದಾಸ್ತಾನುಗಳ ಮೇಲೆ ಶೇ.20 ರಿಯಾಯಿತಿಯನ್ನು ನೀಡಲಾಗುತ್ತಿದೆ.


ಮಾ.6 ರಿಂದ 25 ರವರೆಗೆ ಈ ಅವಕಾಶವಿದ್ದು ಸಾರ್ವಜನಿಕರು ಇದರ ಸದುಪಯೋಗಪಡೆಯಬೇಕೆಂದು ಲಿಡ್ಕರ್ ಮಾರಾಟ ಮಳಿಗೆಯ ಜಿಲ್ಲಾ ಸಂಯೋಜಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *