ಮೈಸುರಿನಲ್ಲಿ ಇತ್ತೀಚಿಗೆ ನಡೆದ ರಾಜ್ಯ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯ 43KG ವಿಭಾಗದಲ್ಲಿ ತೃತೀಯ ಸ್ಥಾನ ಪಡೆದು ಶಿವಮೊಗ್ಗಕ್ಕೆ ಕಂಚಿನ ಪದಕ ತಂದು ಕೊಟ್ಟ ಕುಮಾರಿ ಸಿಂಧೂರ S V ರವರನ್ನು ನಗರದ ಮಾಜಿ ಶಾಸಕರಾದ ಕೆ ಬಿ ಪ್ರಸನ್ನ ಕುಮಾರ್ ರವರು ಶಿವಮೊಗ್ಗ ನಗರದ ನಾಗರಿಕರ ಪರವಾಗಿ ಸನ್ಮಾನಿಸಿ ಅಭಿನಂದಿಸಿದರು.

ಇದೆ ಸಂದರ್ಭದಲ್ಲಿ ಕುಮಾರಿ ಸಿಂಧುರ ಅವರ ಪೋಷಕರರಾದ ವಿಜಯ್ ಕುಮಾರ್ ದಂಪತಿಗಳು, ನಗರ ಪಾಲಿಕೆ ಮಾಜಿ ಸದಸ್ಯರಾದ ದೀಪಕ್ ಸಿಂಗ್, ರಘು, ಲಕ್ಷ್ಮಣ್ ಕಾಂಗ್ರೆಸ್ ಮುಖಂಡರುಗಳಾದ ದಯಾನಂದ್, ಷಣ್ಮುಖ, ಮಂಜುನಾಥ್ ಬಾಬು, ಚಂದ್ರಶೇಖರ್,ವೆಂಕಟೇಶ್, ಪ್ರಸನ್ನ, ಶಿವಾನಂದ, ವಿನೋಬನಗರದ ವರ್ಲ್ಡ್ ಸ್ಪೋರ್ಟ್ಸ್ ಫಿಟ್ನೆಸ್ ಜಿಮ್ ಮಾಲೀಕರು ಹಾಗೂ ತರಬೇತುಧಾರರಾದ ಶರವಣ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…